ಗಣೇಶ ಚತುರ್ಥಿ : ಕಲಾಕುಂಚದಿಂದ ರಾಜ್ಯ ಮಟ್ಟದ ಉಚಿತ ಅಂಚೆ-ಕುಂಚ ಸ್ಪರ್ಧೆ

ದಾವಣಗೆರೆ, ಆ. 31-  ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಶ್ರೀ ಗಣೇಶೋತ್ಸವದ ಅಂಗವಾಗಿ 50 ಪೈಸೆ ಅಂಚೆ ಕಾರ್ಡಿನಲ್ಲಿ ರಾಜ್ಯ ಮಟ್ಟದ ಉಚಿತ ಚಿತ್ರ ಬರೆಯುವ ಅಂಚೆ-ಕುಂಚ ಸ್ಪರ್ಧೆ  ಹಮ್ಮಿಕೊಳ್ಳಲಾಗಿದೆ. 

ಯಾವುದೇ ರೀತಿಯ ವಿವಿಧ ಕಲಾ ಪ್ರಕಾರಗಳಲ್ಲಿ ಶ್ರೀ ಗಣೇಶನ ಚಿತ್ರ ಬರೆದು ಬರುವ ಸೆಪ್ಟಂಬರ್ 10 ರೊಳಗೆ ಕಲಾಕುಂಚ, ಕುವೆಂಪು ರಸ್ತೆ, ಕಸ್ತೂರ್ಬಾ ಬಡಾವಣೆ ದಾವಣಗೆರೆ-577002 ಈ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಕೋರಿಯರ್ ಮೂಲಕ ಕಳಿಸಬಹುದುದಾಗಿದೆ. ವಿವರಕ್ಕೆ ಸಂಪರ್ಕಿಸಿ : 9538732777.

error: Content is protected !!