ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಬಲ ಆಕಾಂಕ್ಷಿ: ಶಿವಕುಮಾರ್ ಒಡೆಯರ್

ಜಗಳೂರು, ಆ.29- ಲೋಕಸಭಾ ಚುನಾವಣೆ‌ ಯಲ್ಲಿ ದಾವಣಗೆರೆ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯಲು  ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಸಂಸದ ದಿ. ಚನ್ನಯ್ಯ ಒಡೆಯರ್ ಅವರ ಪುತ್ರ ನಿವೃತ್ತ ಇಂಜಿನಿಯರ್ ಶಿವಕುಮಾರ್ ಒಡೆಯರ್ ತಿಳಿಸಿದ್ದಾರೆ.

ತಾಲ್ಲೂಕಿನ ಬಿಳಿಚೋಡು ಗ್ರಾಮದ ಶಿವಕುಮಾರ್ ಒಡೆಯರ್ ಅವರು, ಮೂರು ಬಾರಿ ಮಾಜಿ ಸಂಸದರಾಗಿ ಜಿಲ್ಲೆಯಲ್ಲಿ ಉತ್ತಮ ಆಡಳಿತ ನೀಡಿದ ಚನ್ನಯ್ಯ ಒಡೆಯರ್ ಅವರ ಪುತ್ರರಾಗಿದ್ದು. ಲೊಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಆಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದು, ರಾಜಕೀಯ ಸೇವೆ ಮಾಡಲು ಬಯಸಿರುವೆ ಎಂದರು.

ಕ್ಷೇತ್ರ ಪರ್ಯಟನೆ : ದಾವಣಗೆರೆ ಲೋಕಸಭಾ ಕ್ಷೇತ್ರದ ಹರಿಹರ, ಜಗಳೂರು, ದಾವಣಗೆರೆ ಉತ್ತರ ಹಾಗೂ ದಕ್ಷಿಣ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ, ವಿಧಾನ ಕ್ಷೇತ್ರಗಳಲ್ಲಿ ವಿವಿಧ ಮುಖಂಡರುಗಳನ್ನು ಭೇಟಿ ಮಾಡಿ ಸಭೆ, ಸಮಾಲೋಚನೆ, ಕ್ಷೇತ್ರ ಪರ್ಯಟನೆ ನಡೆಸಿರುವೆ ಎಂದು ತಿಳಿಸಿದ್ದಾರೆ.

ಸ್ಥಳೀಯರು ರಾಜಕೀಯ ಮುತ್ಸದ್ದಿಗಳ ಪುತ್ರರೂ, ರಾಜಕೀಯ ಸೇವೆಯಲ್ಲಿ ನಿರಂತರವಾಗಿ ರಾಜಕೀಯ ಹಿನ್ನೆಲೆಯ ಕುಟುಂಬದಿಂದ  ಆಗಮಿಸಿರುವುದು. ವಿಶೇಷ. ಇವರ ಸಹೋದರ ಡಾ.ಉದಯಶಂಕರ್ ಒಡೆಯರ್ ಅವರೂ ರಾಜಕಾರಣಿಗಳ ನಂಟು ಹೊಂದಿದ್ದಾರೆ. ವಿಧಾನ ಸಭಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು.

error: Content is protected !!