ನಗರದಲ್ಲಿಂದು ಪಟ್ಟಸಾಲಿ ಸಮಾಜದ ಸಭೆ

ಪಟ್ಟಸಾಲಿ ನೇಕಾರ ಸಮಾಜ ಸುಧಾರಣಾ ಸಂಘ, ಪಟ್ಟಸಾಲಿ ನೇಕಾರ ಯುವಕರ ಸಂಘ, ಪಟ್ಟಸಾಲಿ ನೇಕಾರ ಮಹಿಳಾ ಸಂಘದ ವಾರ್ಷಿಕ ಮಹಾಸಭೆಯು ಇಂದು ಬೆಳಿಗ್ಗೆ 10 ಗಂಟೆಗೆ ಪಟ್ಟಸಾಲಿ ನೇಕಾರ ವಿದ್ಯಾರ್ಥಿ ನಿಲಯದಲ್ಲಿ ನಡೆಯಲಿದೆ. ಪಟ್ಟಸಾಲಿ ಸಮಾಜದ ಗುರುಗಳಾದ ಶ್ರೀ ಗುಳೇದಗುಡ್ಡದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಸಾಲಿ ನೇಕಾರ ಸಮಾಜ ಸುಧಾರಣಾ ಸಂಘದ ಗೌರವಾಧ್ಯಕ್ಷೆ ನಾಗರತ್ನಮ್ಮ ವಹಿಸಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಪಟ್ಟಸಾಲಿ ನೇಕಾರ ಸಂಘ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೆಚ್‌.ಶಿವಪ್ಪ ಶೆಟ್ರು ಪಾಲ್ಗೊಳ್ಳಲಿದ್ದಾರೆ. ಸಂಘದ ಜಿಲ್ಲಾಧ್ಯಕ್ಷ ಡಿ.ಸಿ.ಶ್ರೀನಿವಾಸ್ ಚಿನ್ನಿಕಟ್ಟಿ, ಗೌರವ ಸಲಹೆಗಾರ ನಾಗೇಶಪ್ಪ ಎನ್. ಚಿನ್ನಿಕಟ್ಟಿ, ಹನುಮಂತಪ್ಪ ಪಿ. ಗುತ್ತಲ್, ಮಹಿಳಾ ಸಂಘದ ಅಧ್ಯಕ್ಷೆ ಗದಿಗೆಮ್ಮ ಯಲ್ಲಪ್ಪ ಕದರಮಂಡಲಗಿ, ಟಿ.ಕೃಷ್ಣಪ್ಪ, ಲಿಂಗರಾಜು ಜೆ. ಹುಲಹಳ್ಳಿ, ನಾಗರಾಜ್‌ ಹೆಚ್. ರಾಂಪುರ ಉಪಸ್ಥಿತರಿರುವರು.

error: Content is protected !!