ನಗರದಲ್ಲಿ ಇಂದು ಯಲ್ಲಮ್ಮದೇವಿ ದೇವಸ್ಥಾನದ 17ನೇ ವಾರ್ಷಿಕೋತ್ಸವ

ಜಾಲಿನಗರದ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ 17ನೇ ವರ್ಷದ ವಾರ್ಷಿಕೋತ್ಸವವು ಇಂದು ಜರುಗಲಿದೆ.

ಬೆಳಿಗ್ಗೆ 8-30 ರಿಂದ ಕುಂಬಾಭಿಷೇಕ, 9-30 ರಿಂದ ಪಂಚಾಮೃತಾಭಿಷೇಕ, 10-30 ರಿಂದ ದೇವಿಯ ಅಲಂಕಾರ, ಗಣಹೋಮ, ದುರ್ಗಾಹೋಮ, ಯಲ್ಲಮ್ಮನ ಹೋಮ, ಮೃತ್ಯುಂಜಯ ಹೋಮ, ನವಗ್ರಹ ಹೋಮ ನಡೆಯಲಿದೆ.

ವಿಶೇಷ ಆಹ್ವಾನಿತರಾಗಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಮೇಯರ್ ವಿನಾಯಕ ಪೈಲ್ವಾನ್,  ಬಿ.ವೀರಣ್ಣ, ಬಿ.ಜೆ. ಅಜಯ್‌ಕುಮಾರ್‌, ಗಾಯತ್ರಿಬಾಯಿ ಖಂಡೋಜಿರಾವ್‌ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

error: Content is protected !!