ಸಿರಿಗೆರೆ, ಆ.3- ಇಲ್ಲಿನ ಅಣ್ಣನ ಬಳಗ, ಶ್ರೀ ತರಳಬಾಳು ಬೃಹನ್ಮಠ ವತಿಯಿಂದ ಶ್ರೀ ಗುರುರಾಜ ದೇಶಿಕೇಂದ್ರ ಮಹಾಸ್ವಾಮಿಗಳವರ 85ನೇ ಶ್ರದ್ಧಾಂಜಲಿ ಕಾರ್ಯಕ್ರಮದ ಅಂಗವಾಗಿ ಆಗಸ್ಟ್ 10 ಮತ್ತು 11ರಂದು ರಾಜ್ಯ ಮಟ್ಟದ ವೀರಗಾಸೆ ಸ್ಪರ್ಧೆ ಏರ್ಪಡಿಸಲಾಗಿದೆ.
ಸ್ಪರ್ಧೆಗಳು ಸಿರಿಗೆರೆಯ ಶ್ರೀಗುರು ಶಾಂತೇಶ್ವರ ದಾಸೋಹ ಮಂಟಪದಲ್ಲಿ ಜರುಗಲಿವೆ, ವಿಜೇತ ತಂಡದವರಿಗೆ ಪ್ರಥಮ 15 ಸಾವಿರ, ದ್ವಿತೀಯ 10 ಸಾವಿರ ಮತ್ತು ತೃತೀಯ 5 ಸಾವಿರ ರೂ.ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಅರ್ಜಿ ಸಲ್ಲಿಸಲು ಇದೇ ದಿನಾಂಕ ಆ. 7 ಕೊನೆಯ ದಿನವಾಗಿರುತ್ತದೆ.
ಭಾಗವಹಿಸಲಿಚ್ಚಿಸುವ ತಂಡಗಳು, ಅಧ್ಯಕ್ಷರು, ಅಣ್ಣನ ಬಳಗ, ಸಿರಿಗೆರೆ-577541 ಇಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ಮೊ.ನಂ.9986191968, 88616
47555 ಈ ನಂಬರಿನ ವಾಟ್ಸಾಪ್ನಲ್ಲಿಯೂ ಹೆಸರು ನೋಂದಾಯಿಸಿಕೊಳ್ಳಬಹುದು.