ಮರಳಿನ ಗುಂಡಿಗೆ ಬಿದ್ದು ಯುವಕನ ಸಾವು

ನ್ಯಾಮತಿ,ಜು.3- ತಾಲ್ಲೂಕಿನ ಮರಿಗೊಂಡನಹಳ್ಳಿ ಗ್ರಾಮದ ಬಳಿ ಇರುವ ಅಚ್ಯುತಾಪುರ ಮರಳಿನ ಖ್ವಾರಿಯ ಗುಂಡಿಯ  ನೀರಿನಲ್ಲಿ ಮುಳಗಿ ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿ ರಾಣೇಬೆನ್ನೂರು ತಾಲ್ಲೂಕಿನ ಜೋಯಿಸರ ಹರಳಹಳ್ಳಿಯ ಗ್ರಾಮದ ಬೀರಪ್ಪ ರಾಮಪ್ಪ ಬಿಲ್ಲಾರ್ (18) ಎಂದು ತಿಳಿದು ಬಂದಿದೆ. ಕುರಿಗಳನ್ನು ಮೇಯಿಸಲು ಹೋದ ಸಂದರ್ಭದಲ್ಲಿ ಸ್ನಾನ ಮಾಡಲೆಂದು ನೀರಿಗೆ ಇಳಿದಾಗ ಈ ಆಕಸ್ಮಿಕ ಸಂಭವಿಸಿರಬಹುದು ಎನ್ನಲಾಗಿದೆ.  

error: Content is protected !!