ಮಲೇಬೆನ್ನೂರಿನಲ್ಲಿ 26 ಕ್ಕೆ `ಬೊಗಸೆ ಭತ್ತ ಬೀಜ ಪ್ರದಾನ’ ಕಾರ್ಯಕ್ರಮ

ಹರಿಹರ, ಜೂ. 22- ಹರಿಹರ ತಾಲ್ಲೂಕಿನ ಮಲೇಬೆನ್ನೂರು ಗ್ರಾಮದಲ್ಲಿ ಕೃಷಿ ಪ್ರಯೋಗ ಪರಿವಾರ, ಶರಣ ಮುದ್ದಣ್ಣ ಸಾವಯವ ಕೃಷಿ ಪರಿವಾರ, ಶ್ರೀ ವೀರಭದ್ರೇಶ್ವರ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಇದೇ ದಿನಾಂಕ 26 ರ ಸೋಮವಾರ ಸಂಜೆ 4 ಗಂಟೆಗೆ ಮಲೇಬೆನ್ನೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ `ಬೊಗಸೆ ಭತ್ತ ಬೀಜ ಪ್ರದಾನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕೊಲ್ಲಾಪುರ ಸಮೀಪದ ಕನ್ನೇರಿ ಮಠದ ಪೀಠಾಧಿಪತಿಗಳಾದ ಶ್ರೀ ಅದೃಶ್ಯ ಕಾಡ ಸಿದ್ದೇಶ್ವರ ಸ್ವಾಮಿಗಳು ವಹಿಸಲಿದ್ದಾರೆ.

ಭತ್ತದ ಭವಿಷ್ಯ ಉಳಿಸುವ ಈ ಮಹತ್ವದ ಕಾರ್ಯಕ್ರಮದಲ್ಲಿ ಆಸಕ್ತರು ಭಾಗವಹಿಸಿ, ಭತ್ತದ ಬೀಜವನ್ನು ಪಡೆದು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಸಿ, ಉಳಿಸಬೇಕಾಗಿದೆ ಎಂದು ಆಯೋಜಕರು ಕೋರಿದ್ದಾರೆ. 

ಹೆಚ್ಚಿನ ಮಾಹಿತಿಗಾಗಿ ಹನುಮಂತಗೌಡ (9901321997), ಸುಜಿತ್ ಕುಮಾರ್ (9481359206) ಇವರನ್ನು ಸಂಪರ್ಕಿಸಬಹುದು.

error: Content is protected !!