ವಯೋವೃದ್ಧನ ಅಪಹರಣ: 20 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಅರೋಪಿಗಳ ಬಂಧನ

ದಾವಣಗೆರೆ, ಜೂ. 3- ಇಲ್ಲಿನ ಅಂಬಿಕಾನಗರದ ಶೇಖರಪ್ಪ ಗೋದಾಮು ಬಳಿ ವಾಸಿಯಾದ  ಲೋಕೇಶ್ (60) ವಯೋ ವೃದ್ಧರೊಬ್ಬರನ್ನು ಅಪಹರಿಸಿ, ಅವರಿಗೆ 20 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಬಗ್ಗೆ ಅವರ ಪುತ್ರ ಕೆಟಿಜೆ ನಗರದಲ್ಲಿ ದೂರು ದಾಖಲಿಸಿದ್ದಾರೆ.

 ಈ ಅಪಹರಣ ಪ್ರಕರಣವನ್ನು ಕೇವಲ 24 ಗಂಟೆಗಳಲ್ಲಿ ಬೇಧಿಸಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಪಹರಣಕ್ಕೆ ಒಳಗಾಗಿದ್ದ ಲೋಕೇಶ್ ಅವರನ್ನೂ ಸಹ ರಕ್ಷಿಸಿದ್ದು, ಈ ಕೃತ್ಯಕ್ಕೆ ಬಳಸಿದ್ದ ಇಟಿಯೋಸ್ ಕಾರು ಹಾಗೂ ಯಮಹಾ ಬೈಕ್ ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗ ಳಾದ ನಿಟುವಳ್ಳಿಯ ಸಾಗರ್, ನಂದಿಹಳ್ಳಿ ಗ್ರಾಮದ ಯುವರಾಜ, ಸುಂದರನಾಯ್ಕ, ದಾವಣಗೆರೆಯ ಚೇತನ್ ಕುಮಾರ್ ಹಾಗೂ ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ಐವರನ್ನು ಚನ್ನಗಿರಿ ತಾಲ್ಲೂಕು ಅಂತಪುರ ಗ್ರಾಮದ ಬಳಿ ದಸ್ತಗಿರಿ ಮಾಡಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.

ಆರೋಪಿತರ ಪತ್ತೆ ಹಾಗೂ ಅಪಹರಣಕ್ಕೆ ಒಳಗಾದ ವೃದ್ಧರನ್ನು ರಕ್ಷಿಸುವ ಯಶಸ್ವೀ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಕೆಟಿಜೆ ನಗರ ಠಾಣೆಯ ಸಿಪಿಐ ಯು.ಜಿ.ಶ್ರೀಧರ್, ಸಂಚಾರ ವೃತ್ತ ನಿರೀಕ್ಷಕ ಅನಿಲ್, ಬಸವನಗರ ಠಾಣೆಯ ನಿರೀಕ್ಷಕ ಆರ್.ಆರ್. ಪಾಟೀಲ್,
ಚನ್ನಗಿರಿ ನಿರೀಕ್ಷಕ ಮಹೇಶ್
ನೇತೃತ್ವದಲ್ಲಿ ಕೆಟಿಜೆ ನಗರ ಪಿಎಸ್‌ಐ
ಎಸ್.ಆರ್.ಕಾಟೆ, ಸಿಬ್ಬಂದಿಗಳಾದ ಪ್ರಕಾಶ್, ಶಂಕರ್ ಜಾಧವ್, ಮಂಜಪ್ಪ, ಷಣ್ಮುಖ, ರವಿ ಲಮಾಣಿ, ಶಿವರಾಜ್, ಮಂಜುನಗೌಡ, ಬಿ.ಆರ್. ರವಿ, ಬಸವರಾಜ್, ಹರೀಶ್ ನಾಯ್ಕ, ತಿಮ್ಮಣ್ಣ ಎನ್.ಆರ್., ಶ್ರೀನಿವಾಸ, ರಾಘವೇಂದ್ರ, ಶಾಂತರಾಜ್, ಡಿಸಿಐಬಿ ಘಟಕದ ಸಿಬ್ಬಂದಿ ಬಾಲಾಜಿ, ರಾಘವೇಂದ್ರ, ರಮೇಶ್, ಮಜೀದ್, ನಟರಾಜ್, ಮಲ್ಲಿಕಾರ್ಜುನ, ಮಾರುತಿ, ಅಶೋಕ, ಆಂಜನೇಯ, ಸುರೇಶ್ ಅವರನ್ನು ಎಸ್ಪಿ ಡಾ. ಕೆ. ಅರುಣ್ ಅಭಿನಂದಿಸಿದ್ದಾರೆ.

error: Content is protected !!