ಗ್ರಾಹಕ ವ್ಯಾಜ್ಯಗಳ ಪರಿಹಾರ ನಾಳೆ ಫೋನ್-ಇನ್ ನೇರ ಪ್ರಸಾರ

 ದಾವಣಗೆರೆ, ಮೇ 30- ಕರ್ನಾಟಕ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ವತಿಯಿಂದ ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಕುರಿತು ಗ್ರಾಹಕರ ಜಾಗೃತಿ ಮೂಡಿಸುವ ಸಲುವಾಗಿ ಜೂನ್ 1 ರಂದು ರಾತ್ರಿ 8 ರಿಂದ 8.30ರ ವರೆಗೆ ಆಕಾಶವಾಣಿ ಫೋನ್-ಇನ್ ನೇರ ಪ್ರಸಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 

ಗ್ರಾಹಕರು ಯಾವುದೇ ಪ್ರಶ್ನೆಗಳಿದ್ದಲ್ಲಿ ದೂರವಾಣಿ 080-22370477 /22370488/22370499ಗೆ ನಿಗದಿಪಡಿಸಿದ ಸಮಯದಲ್ಲಿ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಅಥವಾ ಪ್ರಶ್ನೆಗಳನ್ನು   HYPERLINK mailto:[email protected]” \t “_blank” [email protected] ಮೂಲಕ ಮೇ 31ರ ಒಳಗಾಗಿ ಕಳುಹಿಸಬೇಕೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತಿಳಿಸಿದೆ.

error: Content is protected !!