ವಿಜಯನಗರ ಜಿಲ್ಲೆಯಾದಲ್ಲಿ ಕೂಡ್ಲಿಗಿ ಸೇರಿಸುವಂತೆ ಒತ್ತಾಯಿಸುವೆ

ಕೂಡ್ಲಿಗಿ, ಸೆ.22- ನೂತನ ವಿಜಯನಗರ ಜಿಲ್ಲೆಯಾದಲ್ಲಿ ಕೂಡ್ಲಿಗಿಯನ್ನು ಸೇರಿಸಲು ಸರ್ಕಾರದ ಮೇಲೆ ಒತ್ತಡ ಹಾಕು ವುದಾಗಿ ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದ್ದಾರೆ.

ನಿನ್ನೆ ಇಲ್ಲಿ ಏರ್ಪಾಡಾಗಿದ್ದ ಕೂಡ್ಲಿಗಿ ತಾಲ್ಲೂಕಿನ ವಿವಿಧ ಸಂಘಟನೆಗಳ ಮುಖಂಡರು ಕರೆದಿದ್ದ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.ವಿಜಯನಗರ ಜಿಲ್ಲೆ ರಚನೆ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾಪ ಇಲ್ಲ. ಈ ಬಗ್ಗೆ ಕೂಡ್ಲಿಗಿ ತಾಲ್ಲೂಕಿನ ಜನತೆ ಆತಂಕಪಡುವ ಅಗತ್ಯವಿಲ್ಲ ಎಂದರು.

ಸಭೆಯಲ್ಲಿ  ಕೂಡ್ಲಿಗಿ ತಾ.ಪಂ. ಅಧ್ಯಕ್ಷೆ ಕೆ. ನಾಗರತ್ನಮ್ಮ ಲಿಂಗಪ್ಪ, ಕೂಡ್ಲಿಗಿ ಮಂಡಲ ಬಿಜೆಪಿ ಅಧ್ಯಕ್ಷ ಚನ್ನಪ್ಪ, ಜಿಲ್ಲಾ ಕಾಂಗ್ರೆಸ್ ಎಸ್.ಟಿ. ಮೋರ್ಚಾ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಬಿಜೆಪಿ ಎಸ್.ಟಿ. ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು, ಕೂಡ್ಲಿಗಿ ಮಂಡಲ ಬಿಜೆಪಿ ಯುವ ಘಟಕದ ಅಧ್ಯಕ್ಷ ಕೆ. ಸುನೀಲ್ ಗೌಡ್ರು,  ತಾ.ಪಂ. ಸದಸ್ಯ ಹುಡೇಂ ಪಾಪನಾಯಕ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ. ಶಿವರಾಜ, ನಾಗರಾಜ, ಬಿಜೆಪಿ ಮುಖಂಡರಾದ ಕೆ.ಎಚ್.ವೀರನಗೌಡ, ಕೆ.ಎಂ. ತಿಪ್ಪೇಸ್ವಾಮಿ, ಭೀಮೇಶ್, ಟಿ.ಜಿ. ಮಲ್ಲಿಕಾರ್ಜುನ, ಎಸ್.ದುರುಗೇಶ್, ಅಮಲಾಪುರ ಸುದರ್ಶನ, ಚಂದ್ರು,  ಕೂಡ್ಲಿಗಿಯ ಮುಖಂಡರಾದ  ವಾಗೀಶಯ್ಯ, ರಾಘವೇಂದ್ರ, ಸಣ್ಣಕೊತ್ಲಪ್ಪ, ಜಿ. ರಾಘವೇಂದ್ರ, ಜಯರಾಂ ನಾಯಕ, ಡಿಕೆಬಿ ರಾಜು,  ವಿಕ್ಟರಿ ಸುರೇಶ್, ಸಯ್ಯದ್ ಶುಕುರ್,  ವಿವೇಕಾನಂದ, ಕೆ.ಕೆ. ಹಟ್ಟಿ ವೀರಣ್ಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

error: Content is protected !!