ಓರ್ವನ ಬಂಧನ : 9 ಮೋಟಾರು ಸೈಕಲ್ ವಶ

ಹರಪನಹಳ್ಳಿ, ಫೆ.4- ಮೋಟಾರ್‌ ಸೈಕಲ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ, ಆತನಿಂದ 9 ಮೋಟಾರ್‌ ಸೈಕಲ್‌ಗಳನ್ನು ವಶ ಪಡಿಸಿಕೊಂಡ ಘಟನೆ ಪಟ್ಟಣದಲ್ಲಿ  ಜರುಗಿದೆ.

ಕನಕನ ಬಸಾಪುರ ಗ್ರಾಮದ ಪೂಜಾರಿ ಕೊಟ್ರೇಶ್‌ (41) ಬಂಧಿತ ಆರೋಪಿ. ಬೈಕನ್ನು ಏಪ್ರಿಲ್ – 2021 ರಂದು ಹಿರೆಕೆರೆ ಹತ್ತಿರವಿರುವ ಲಕ್ಕಿ ಡಾಬಾದ ಮುಂದೆ ಕಳ್ಳತನ ಮಾಡಿರುವುದಾಗಿ ಬಂಧಿತನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಈತ ಹರಪನಹಳ್ಳಿ, ದಾವಣಗೆರೆ, ಕೊಟ್ಟೂರು, ಮುಂಡರಗಿ ಕಡೆಗಳಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡಿದ್ದಾನೆ.

ಡಿವೈಎಸ್ಪಿ ವಿ.ಎಸ್. ಹಾಲಮೂರ್ತಿರಾವ್ ಹಾಗೂ ಸಿಪಿಐ ನಾಗರಾಜ್‌ ಎಂ.ಕಮ್ಮಾರ್‌ರವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಪ್ರಕಾಶ್‌ ಅವರ ಜೊತೆಯಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ರವಿ ದಾದಾಪುರ, ಪೂರ್ವಾಚಾರಿ, ಮಹೇಶ್, ನಾಗರಾಜ್ ಚಿಂಚಲಿ, ಮನೋಹರ್‌ ಪಟೇಲ್, ಸಿದ್ದಲಿಂಗಮ್ಮ, ಕೆ.ಮಹಾಂತೇಶ್‌, ವಾಸುದೇವನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇಲ್ಲಿನ ಪೊಲೀಸರ ಕಾರ್ಯವನ್ನು ವಿಜಯನಗರ ಜಿಲ್ಲಾ ಎಸ್ಪಿ ಕೆ.ಅರುಣ್ ಶ್ಲ್ಯಾಘಿಸಿದ್ದಾರೆ.

error: Content is protected !!