ದಾವಣಗೆರೆ ಸಮೀಪದ ನೀಲಾನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಶ್ರೀ ಸ್ವಾಮಿ ರಥೋತ್ಸವ ಹಾಗೂ ಸಂಜೆ ಕಾರಣಿಕ ನಡೆಯಲಿದೆ ಎಂದು ದೇವಸ್ಥಾನದ ಕನ್ವೀನರ್ ಎನ್.ಎಂ. ಆಂಜನೇಯ ಗುರೂಜಿ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ 10.10ಕ್ಕೆ ನೂತನ ತೇರಿನ ರಥೋತ್ಸವ ನಡೆಯಲಿದೆ. ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 1.30 ರವರೆಗೆ ಭಕ್ತಾದಿಗಳು ಹರಕೆ ತೀರಿಸುವುದು. ಸಂಜೆ 4.30ಕ್ಕೆ ಬೇಟೆ ಆಡುವುದು. ನಂತರ 5.30ಕ್ಕೆ ಮುಳ್ಳುಗದ್ದುಗೆ ಏರುವುದು. ಸಂಜೆ 6.30ಕ್ಕೆ ಕಾರಣಿಕ ನುಡಿಯುವುದು. ರಾತ್ರಿ 7.30ಕ್ಕೆ ಭೂತ ಸೇವೆ, ನಂತರ 8.30ಕ್ಕೆ ಓಕಳಿ ಕಾರ್ಯ ಹಾಗೂ 9.30ಕ್ಕೆ ಗಂಗೆ ಪೂಜೆ ನೆರವೇರುವುದು.