ದಾವಣಗೆರೆ, ಮಾ.4- ಬಾಡಾ ಕ್ರಾಸ್ ಬಳಿ ಇರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸೋಮವಾರ ಡಾ. ಪಂಡಿತ ಪುಟ್ಟರಾಜ ಗವಾಯಿಗಳ 111ನೇ ಜಯಂತ್ಯುತ್ಸವ ನೆರವೇರಿತು.
ಸೌಮ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆದಿದ್ದು, ಮಕ್ಕಳಿಗೆ ಗಾಯನ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ವೇಳೆ ಮಮತಾ ನಾಗರಾಜ್, ಶಾಂತ ಶಿವಶಂಕರ್, ದೀಪಾ ಕಿರಣ್, ಸುಧಾ ಮಲ್ಕಪ್ಪ, ನಿವೇದಿತಾ, ಶಶಿಕಲಾ, ಸೌಮ್ಯ ಶಿವಕುಮಾರ್, ಸುರೇಖ, ಲತಾ, ಕವಿತಾ ಇತರರು ಇದ್ದರು.