ಆತ್ಮವಿಶ್ವಾಸವೇ ಶಿಕ್ಷಣದ ಮೊದಲ ಮೆಟ್ಟಿಲು : ಇಸ್ಮಾಯಿಲ್ ಯಲಿಗಾರ

ಆತ್ಮವಿಶ್ವಾಸವೇ ಶಿಕ್ಷಣದ ಮೊದಲ ಮೆಟ್ಟಿಲು : ಇಸ್ಮಾಯಿಲ್ ಯಲಿಗಾರ

ಹರಪನಹಳ್ಳಿ, ಫೆ. 24- ಆತ್ಮವಿಶ್ವಾಸವೇ ಶಿಕ್ಷಣದ ಮೊದಲ ಮೆಟ್ಟಿಲು ಎಂದು ಸಂಪನ್ಮೂಲ ವ್ಯಕ್ತಿ ಇಸ್ಮಾಯಿಲ್ ಯಲಿಗಾರ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷೆ ಒಂದು ಹಬ್ಬ ಕುರಿತಂತೆ ವ್ಯಕ್ತಿತ್ವ ವಿಕಸನ ಹಾಗೂ ಯಶಸ್ಸು ಎಂದರೇನು ಎಂಬ ವಿಷಯ ಕುರಿತು ಅವರು ಮಾತನಾಡುತ್ತಿದ್ದರು.

ಸೋಲನ್ನೇ ಮೆಟ್ಟಿಲು ಮಾಡಿಕೊಂಡು ಸಾಧನೆ ಮಾಡಬೇಕು. ತಂದೆ-ತಾಯಿಯರ ಶ್ರಮದಾಯಕ ಬದುಕು, ಗುರುಗಳ ಪಾಠ, ಬೋಧನೆಯನ್ನು ನೆನಪಿಸಿಕೊಂಡು, ಜೀವನದಲ್ಲಿ ಯಶಸ್ಸು ಕಾಣಬೇಕು. ಸತತ ಪರಿಶ್ರಮ, ಬುದ್ಧಿವಂತಿಕೆ ಹಾಗೂ ಸೃಜನಶೀಲತೆಯಿಂದ ಓದು, ಬರವಣಿಗೆಯನ್ನು ದಕ್ಕಿಸಿಕೊಂಡರೆ, ನಿಜವಾದ ಫಲಿತಾಂಶ ದೊರೆಯುತ್ತದೆ. 

ಭಾರತದ ಸಾಧನೀಯ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ, ಕೆ.ಆರ್. ನಾರಾಯಣ್, ಅಮೆರಿಕಾ ಕಂಡ
ಶ್ರೇಷ್ಠ ಅಧ್ಯಕ್ಷ
ಅಬ್ರಹಾಂ ಲಿಂಕನ್, ಭಾರತದ ಪ್ರಧಾನಿ ಮನಮೋಹನ್‌ ಸಿಂಗ್ ಇವರೆಲ್ಲ ಓದಿದ್ದು ಸರ್ಕಾರಿ ಶಾಲೆಗಳಲ್ಲಿ. ಇವರೆಲ್ಲರೂ ಸಾಧನೆಯ ಬದುಕು ಕಂಡವರು. ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರ ಬದುಕು ನಮಗೆ ದಾರಿದೀಪವಾಗಬೇಕು. 

ಬುದ್ಧ, ಬಸವಣ್ಣ, ಗಾಂಧಿ ಅಲ್ಲದೆ ಸೂಫಿ, ಸಂತರ ಜೀವನ ನಮಗೆ ಮಾರ್ಗದರ್ಶನವಾಗಲಿ. ನಮ್ಮ ಬಗ್ಗೆ ನಮಗೆಲ್ಲ ಆತ್ಮವಿಶ್ವಾಸ  ಇರಲಿ ಎಂದರು.

ಈ ಸಭೆಯಲ್ಲಿ ಪ್ರೌಢಶಾಲೆಯ ಮುಖ್ಯಗುರು ಮಮ್ತಾಜ್ ಬೇಗಂ,  ಶಿಕ್ಷಕರಾದ ಜಯ ಮಾಲತೇಶ್, ಲತಾ ರಾಥೋಡ್, ಪಂಪಾನಾಯ್ಕ್, ವಿಶ್ವನಾಥ್,  ಶಬಾನಾ ಸೇರಿದಂತೆ ಇತರರು  ಇದ್ದರು.

error: Content is protected !!