ದಾವಣಗೆರೆ, ಫೆ. 19- ವಿಜಯನಗರ ಸೊಸೈಟಿ ಅಧ್ಯಕ್ಷರಾಗಿ ಬಿ.ರಮೇಶ್, ಉಪಾಧ್ಯಕ್ಷರಾಗಿ ಬಿ.ಚಂದ್ರಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಅಧೀಕ್ಷಕರಾದ ಪಿ.ನಿವೇದಿತಾ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ತಿಪ್ಪೇಸ್ವಾಮಿ ಬಿ., ಮಮತ ಎಂ., ಶಿವಾನಂದ ಜೆ.ಕೆ., ಪಂಪಣ್ಣ ದಬಡಿ, ರಮೇಶ್ ಬಿ. (ಪಿ.ಜೆ.), ಮಂಜುನಾಥ ಬಿ., ದುಗ್ಗೇಶ್ ಎಸ್., ವಾಣಿ ಹೆಚ್.ಸಿ., ವಂದನ ಹೆಚ್.ಎಂ., ಶೃತಿ ಎಂ. ವ್ಯವಸ್ಥಾಪಕ ದಯಾನಂದ ದೊಡ್ಡಮನಿ ಉಪಸ್ಥಿತರಿದ್ದರು.