ಸಂತ ಸೇವಾಲಾಲ್ ಜಯಂತಿ : ಮೆರವಣಿಗೆ

ಸಂತ ಸೇವಾಲಾಲ್ ಜಯಂತಿ : ಮೆರವಣಿಗೆ

ಜಗಳೂರು, ಫೆ. 12 –  ಸಂತ ಸೇವಾಲಾಲ್ ಅವರ 286 ನೇ  ಜಯಂತ್ಯೋತ್ಸವದ  ಅಂಗ ವಾಗಿ ಬಂಜಾರ ಸಮುದಾಯದಿಂದ ಪ್ರವಾಸಿ ಮಂದಿರದಿಂದ  ತಾಲ್ಲೂಕು ಕಛೇರಿವರೆಗೂ ಬೆಳ್ಳಿ ಸಾರೋಟ್‌ನಲ್ಲಿ ಸಂತ ಸೇವಾಲಾಲ್ ಭಾವ ಚಿತ್ರದ ಬೃಹತ್ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, 2017 ರಲ್ಲಿ ಸರ್ಕಾರದ ಆದೇಶದಂತೆ ಸಂತ ಸೇವಾಲಾಲ್ ಅವರ ಜಯಂತಿಯನ್ನು ಸರ್ಕಾರಿ ದಿನಾಚರಣೆಯನ್ನಾಗಿ ಪ್ರತಿ ಕಛೇರಿಗಳಲ್ಲಿಯೂ ರಜಾ ರಹಿತವಾಗಿ ಆಚರಿಸಲಾಗುತ್ತಿದೆ ಎಂದರು.

ಬಂಜಾರ ಸಮುದಾಯದವರು ಸಂತ ಸೇವಾಲಾಲ್ ಅವರನ್ನು ಸ್ಮರಿಸುವ ಮೂಲಕ  ಹಿತ ಕಾಯುವುದು ಗುರುಗಳ ಆದರ್ಶಗಳನ್ನು ಪಾಲಿಸಬೇಕು  ಎಂದು ಸಲಹೆ ನೀಡಿದರು.

ಕೆಪಿಸಿಸಿ ಎಸ್.ಟಿ. ಘಟಕದ ರಾಜ್ಯ ಕಾರ್ಯದರ್ಶಿ ಕೀರ್ತಿಕುಮಾರ್ ಮಾತನಾಡಿ, ಬಂಜಾರ ಸಮುದಾಯದವರ ಸಮುದಾಯ ಭವನ ನಿರ್ಮಾ ಣಕ್ಕೆ ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವನಾಯ್ಕ ಅವರ ಸಹಕಾರದಿಂದ ನಮ್ಮ ತಂದೆ ಶಾಸಕ ಬಿ.ದೇವೇಂದ್ರಪ್ಪ ನೇತೃತ್ವದಲ್ಲಿ ನಿವೇಶನ ಗುರುತಿಸಲಾಗಿದ್ದು, ಮುಂಬರುವ ವರ್ಷದ ಸಂತ ಸೇವಾಲಾಲ್ ಜಯಂತ್ಯೋತ್ಸವದ ವೇಳೆಗೆ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೊಟ್ಟೂರು ತಾಲ್ಲೂಕು ದೂಪದಹಳ್ಳಿ ಬಂಜಾರ ಮಠದ ಶಿವಪ್ರಕಾಶ್ ಸ್ವಾಮೀಜಿ ಆಶೀ ರ್ವಚನ ನೀಡಿ, ಸಂತ ಸೇವಾಲಾಲ್ ಅವರು ಬಂಜಾರ ಸಮುದಾಯಕ್ಕೆ ಸೀಮಿತವಾಗದೇ ವಿಶ್ವಕ್ಕೆ ಸಂದೇಶ ಸಾರಿದವರು. ಅವರ ಸಂದೇಶ ಗಳನ್ನು ಸಮಾಜಕ್ಕೆ ಪಸರಿಸೋಣ ಎಂದರು.

ಬಂಜಾರ ಸಮುದಾಯದ ಯುವಕರು, ತೀಜ್ ಹೊತ್ತ ಮಹಿಳೆಯರು, ಲಂಬಾಣಿ ಉಡುಪು ಧರಿಸಿ ಡಿಜೆ ಹಾಡಿಗೆ ಹೆಜ್ಜೆ ಹಾಕಿದರು. ಮಾಲಾಧಾರಿಗಳು ಇಂದಿನಿಂದ ಆರಂಭವಾಗುವ ಸಂತ ಸೇವಾಲಾಲ್ ಜಯಂತ್ಯೋತ್ಸವದ ಜಾತ್ರೆಗೆ ಮಾಲಾಧಾರಿಗಳು ಭಾಗವಹಿಸಲು ಪಾದಯಾತ್ರೆ ತೆರಳಿದರು.

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಕೆಪಿ ಪಾಲಯ್ಯ, ಪ.ಪಂ. ಅಧ್ಯಕ್ಷ ನವೀನ್ ಕುಮಾರ್, ಲಂಬಾಣಿ ಸಮಾಜದ ತಾಲ್ಲೂಕು ಅಧ್ಯಕ್ಷ ತಿಪ್ಪೇಸ್ವಾಮಿ ನಾಯ್ಕ, ತಾ.ಪಂ ಇಓ ಕೆಂಚಪ್ಪ, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಸಮಾಜದ ಮುಖಂಡರಾದ ಮೂರ್ತಿನಾಯ್ಕ, ನರೇನಹಳ್ಳಿ ಕುಮಾರನಾಯ್ಕ, ಸತೀಶ್ ನಾಯ್ಕ, ವಕೀಲ ಉಮಾಪತಿನಾಯ್ಕ, ಧರ್ಮನಾಯ್ಕ, ಮಂಜಾ ನಾಯ್ಕ, ಅಂಜಿನಾಯ್ಕ, ರಾಜುನಾಯ್ಕ, ಕೊಟ್ರೇಶ್ ನಾಯ್ಕ, ಬಿಸ್ತುವಳ್ಳಿ ಬಾಬು, ಸಮಾಜಕಲ್ಯಾಣ ಇಲಾಖೆ ನಿವೃತ್ತ ಸಹಾಯ ನಿರ್ದೇಶಕ ಬಿ. ಮಹೇಶ್ವರಪ್ಪ ಮತ್ತಿತರರು ಭಾಗವಹಿಸಿದ್ದರು.

error: Content is protected !!