ಹರಿಹರದಲ್ಲಿ ಇಂದು – ನಾಳೆ ಶ್ರೀ ಮೌನೇಶ್ವರ ಸ್ವಾಮಿ ಜಯಂತ್ಯೋತ್ಸವ

ಹರಿಹರದಲ್ಲಿ ಇಂದು – ನಾಳೆ    ಶ್ರೀ  ಮೌನೇಶ್ವರ ಸ್ವಾಮಿ ಜಯಂತ್ಯೋತ್ಸವ

ಶ್ರೀ ಕಾಳಿಕಾಂಬಾ, ಗುರು ಮೌನೇಶ್ವರ ಸೇವಾ ಸಮಿತಿ ಹಾಗೂ ವಿಶ್ವಕರ್ಮ ಸಮಾಜದ ವತಿಯಿಂದ ಇಂದು ಮತ್ತು ನಾಳೆ ಶ್ರೀ ಜಗದ್ಗುರು ಮೌನೇಶ್ವರ ಸ್ವಾಮಿ ಜಯಂತ್ಯೋತ್ಸವ ಸಮಾರಂಭವನ್ನು ಹಳೆ ಭರಂಪುರ ಬಡಾವಣೆಯ ಶ್ರೀ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಡಿ.ಪಿ. ರಾಜಾಚಾರ್ಯ ತಿಳಿಸಿದ್ದಾರೆ.

ಇಂದು ಅಂತರವಳ್ಳಿ ಶ್ರೀ ಗುರು ನಿರಂಜನ ಸ್ವಾಮಿಗಳು, ಹುಲಗೂರು ಶ್ರೀ ಮೌನೇಶ್ವರ ಸ್ವಾಮಿಗಳವರ ಸಾನ್ನಿಧ್ಯದಲ್ಲಿ ಬೆಳಗ್ಗೆ 6-30ಕ್ಕೆ ಶ್ರೀ ಕಾಳಿಕಾಂಬಾ ದೇವಿ ಮೂರ್ತಿಯನ್ನು   ಮೆರವಣಿಗೆಯೊಂದಿಗೆ ಕರೆತರಲಾಗುತ್ತದೆ. 

ನಾಳೆ ಸೋಮವಾರ ಬೆಳಿಗ್ಗೆ ಜಿ.ಬಿ. ವೀರೇಶ್ ಆಚಾರ್ಯರವರ ನೇತೃತ್ವದಲ್ಲಿ ಉಪನಯನ, ವಿವಾಹ, ಜವಳ ಹಾಗೂ ಅಕ್ಷತಾರೋಹಣ.   ಶ್ರೀ ಗುರು ಮೌನೇಶ್ವರ ಸ್ವಾಮಿಯ ಪಾಲಕಿ ಉತ್ಸವ ನಡೆಯಲಿದೆ. 11-30ಕ್ಕೆ ನಡೆಯಲಿರುವ ಧಾರ್ಮಿಕ ಸಮಾರಂಭದ ಸಾನ್ನಿಧ್ಯವನ್ನು ಅಂತರವಳ್ಳಿ ಶ್ರೀ ಗುರು ನಿರಂಜನ ಮಹಾಸ್ವಾಮಿಗಳು, ಹುಲಗೂರು ಶ್ರೀ ಮೌನೇಶ್ವರ ಮಹಾಸ್ವಾಮಿಗಳು  ವಹಿಸಲಿದ್ದಾರೆ. ಸೇವಾ ಸಮಿತಿ ಅಧ್ಯಕ್ಷ ಡಿ.ಪಿ. ರಾಜಾಚಾರ್ಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮತ್ತಿತರರು ಆಗಮಿಸುವರು.  

error: Content is protected !!