ದಾವಣಗೆರೆ, ಜ. 16 – ರಸ್ತೆ ಸುರಕ್ಷತಾ ಜಾಗೃತಾ ಮಾಸಾಚರಣೆ ಉದ್ಘಾಟನಾ ಸಮಾರಂಭವನ್ನು ಗುರುವಾರ ಸಾರಿಗೆ ಕಚೇರಿಯ ಸಭಾಂಗಣದಲ್ಲಿ ನೆರವೇರಿಸಲಾಯಿತು. ಪ್ರಮುತೇಶ್ ಪ್ರಾದೇಶಿಕ ಸಾರಿಗೆ ಅಧಿಕಾರಿ, ನಾಗೇಶ್ ಪ್ರಾಧ್ಯಾಪಕರು ಯು.ಬಿ.ಡಿ.ಟಿ. ತಾಂತ್ರಿಕ ವಿದ್ಯಾಲಯ ಸಂಪನ್ಮೂಲ ವ್ಯಕ್ತಿಯಾಗಿ ಹಾಜರಿದ್ದು ಉಪನ್ಯಾಸ ನೀಡಿದರು. ದಾವಣಗೆರೆ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ನಯ್ಯದ್ ಸೈಫುಲ್ಲಾ, ಮೋಟಾರು ಚಾಲನಾ ತರಬೇತಿ ಶಾಲೆಯ ಪ್ರಾಂಶುಪಾಲರು. ಕಚೇರಿಗೆ ಆಗಮಿಸಿದ ಸಾರ್ವಜನಿಕರಿಗೆ ರಸ್ತೆ ನಿಯಮಗಳ ಪಾಲನೆಗೆ ಅರಿವು ಮೂಡಿಸಲಾಯಿತು.
ನಗರದ ಆರ್.ಟಿ.ಓ. ಕಚೇರಿಯಲ್ಲಿ ರಸ್ತೆ ಸುರಕ್ಷತಾ ಜಾಗೃತಾ ಮಾಸಾಚರಣೆ
