ದಾವಣಗೆರೆ, ಜ. 3 – ಕಳೆದ ವಾರ ಉತ್ತರಪ್ರದೇಶದ ಲಕ್ನೋದಲ್ಲಿ ಎಂ.ಆರ್. ಜೈಪುರಿಯಾಗೋಲ್ ಕ್ಯಾಂಪಸ್ ನಲ್ಲಿ ನಡೆದ ರಾಷ್ಟ್ರಮಟ್ಟದ 15 ನೇ ನ್ಯಾಷನಲ್ ಇಂಡೋರ್ ಆರ್ಚರಿ ಚಾಂಪಿಯನ್ ಷಿಪ್ ನಲ್ಲಿ 7 ನೇ ತರಗತಿ ಓದುತ್ತಿರುವ ಕುಮಾರ ವೈಭವ್ . ಜಿ. ಬಂಗಾರದ ಪದಕ ಪಡೆದು ನಗರಕ್ಕೆ ಕೀರ್ತಿ ತಂದಿದ್ದಾರೆ. ಇವರು ನಗರದ ಖ್ಯಾತ ನೇತ್ರ ತಜ್ಞರಾದ ಡಾ. ಸುನಿಲ್ ಜ. ಹಾಗೂ ಡಾ. ಅಶ್ವಿನಿಯವರ ಸುಪುತ್ರರು. ಬಂಗಾರದ ಪದಕ ಪಡೆದ ಕು.ವೈಭವ್ ಜಿ ಹಾಗೂ ತರಬೇತಿ ನೀಡಿದ ಹೆಚ್.ಎಸ್. ಅನಿಲ್ ಕುಮಾರ್ ರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕ್ರೀಡಾಪಟು ವೈಭವ್ ಜಿ. ಅವರಿಗೆ ಬಂಗಾರದ ಪದಕ
