ಜಗಳೂರು, ಡಿ.8- ತಾಲ್ಲೂಕಿನ ಬಿಳಿಚೋಡು ಗ್ರಾಮದ ನಿವಾಸಿ ಪಿ. ಅಜ್ಜಯ್ಯ ಮತ್ತು ಶ್ರೀಮತಿ ರೂಪಾ ದಂಪತಿಯ ಪುತ್ರಿ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಪಿ.ಎ. ತೇಜಸ್ವಿನಿ ಅವರು ಈಚೆಗೆ ನಡೆದ ತಾಲ್ಲೂಕು ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚರ್ಚಾ ಸ್ಪರ್ಧೆ : ಪಿ.ಎ. ತೇಜಸ್ವಿನಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
