ಕಿತ್ತೂರು ಉತ್ಸವದ ಸುಗಮ ಸಂಗೀತ ಕಾರ್ಯಕ್ರಮಕ್ಕೆ ಚಿಂದೋಡಿ ಆಯ್ಕೆ

ಕಿತ್ತೂರು ಉತ್ಸವದ ಸುಗಮ ಸಂಗೀತ ಕಾರ್ಯಕ್ರಮಕ್ಕೆ ಚಿಂದೋಡಿ ಆಯ್ಕೆ

ದಾವಣಗೆರೆ, ಅ.24- ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ನಾಳೆ ದಿನಾಂಕ 25ರ ಶುಕ್ರವಾರ ಸಂಜೆ 5 ಗಂಟೆಗೆ ನಡೆಯಲಿರುವ ಕಿತ್ತೂರು ಉತ್ಸವದಲ್ಲಿ ಹಿರಿಯ ರಂಗಭೂಮಿ ಕಲಾವಿದ ಚಿಂದೋಡಿ ಶಂಭುಲಿಂಗಪ್ಪ ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಕಿತ್ತೂರು ರಾಣಿ ಚನ್ನಮ್ಮನ ಜಯಂತ್ಯೋತ್ಸವ ಮತ್ತು ವಿಜಯೋತ್ಸವದ ಅಂಗವಾಗಿ ಆಚರಿಸುತ್ತಿರುವ ಕಿತ್ತೂರು ರಾಣಿ ಚೆನ್ನಮ್ಮ ಉತ್ಸವದ ನಿಮಿತ್ತ ಕರ್ನಾಟಕದ ಹೆಸರಾಂತ ಸುಗಮ ಸಂಗೀತ ಹಾಗೂ ನಾಟಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಚಿಂದೋಡಿ ಶಂಭುಲಿಂಗಪ್ಪ, ದಾವಣಗೆರೆಯ  ಹೆಸರಾಂತ ಗಾಯಕ-ಗಾಯಕಿಯರಾದದ ಶ್ರೀಮತಿ ಲಕ್ಷ್ಮಿ ಹಾಗೂ ಸುನಿತಾ, ಪ್ರಕಾಶ್,  ಮಹಾಂತೇಶ್, ಕಲಾವಿದರ ಸಂಘದ ಅಧ್ಯಕ್ಷ  ಬಿ.ಕೆ. ಗಣೇಶ್ ಅವರ ಸಾರಥ್ಯದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.

error: Content is protected !!