ಯತ್ನಾಳ್‌, ಸಿ.ಟಿ. ರವಿ, ಸೂಲಿಬೆಲೆ ವಿರುದ್ಧ ದೂರು

ಯತ್ನಾಳ್‌, ಸಿ.ಟಿ. ರವಿ, ಸೂಲಿಬೆಲೆ ವಿರುದ್ಧ ದೂರು

ದಾವಣಗೆರೆ, ಅ.24- ಒಂದು ಸಮುದಾಯವನ್ನು ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿರುವ ಹಾಗೂ ಸಮಾಜದಲ್ಲಿ ಸಾಮರಸ್ಯವನ್ನು ಕದಡುವ ಪ್ರಯತ್ನ ನಡೆಸುವ ರೀತಿಯಲ್ಲಿ ಹೇಳಿಕೆ ನೀಡಿದರೆನ್ನಲಾದ ಬಸವರಾಜ ಪಾಟೀಲ್ ಯತ್ನಾಳ್ ಮತ್ತು  ಸಿ.ಟಿ. ರವಿ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಯಿತು. ಈ ಸಂದರ್ಭದಲ್ಲಿ ಅಬ್ದುಲ್ ಘನಿ ತಾಹೇರ್, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿ ಇಸ್ಮಾಯಿಲ್ ಖಾನ್, ವಕೀಲ ಹನೀಫ್, ವಕೀಲ ಖಲೀಲ್, ನಿವೃತ್ತ ಎಎಸ್ಐ ನಬಿ ಖಾನ್, ಕಲಾಂ ಉಪಸ್ಥಿತರಿದ್ದರು.

error: Content is protected !!