ಜಿಗಳಿಯಲ್ಲಿ ರಾಣಿ ಚೆನ್ನಮ್ಮ ಜಯಂತಿ

ಜಿಗಳಿಯಲ್ಲಿ ರಾಣಿ ಚೆನ್ನಮ್ಮ ಜಯಂತಿ

ಮಲೇಬೆನ್ನೂರು, ಅ.23- ಜಿಗಳಿ ಗ್ರಾ.ಪಂ. ಕಚೇರಿ ಮತ್ತು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಹಾಗೂ 200ನೇ ವಿಜಯೋತ್ಸವವನ್ನು ಆಚರಿಸಲಾಯಿತು.

ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕ ಗುಡ್ಡಪ್ಪ ಅವರು, ಚೆನ್ನಮ್ಮ ಅವರ ಬಗ್ಗೆ ತಿಳಿಸಿಕೊಟ್ಟರು. ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ ಅವರು, ಕಿತ್ತೂರು ರಾಣಿ ಚೆನ್ನಮ್ಮನ ದೇಶ ಪ್ರೇಮ ಎಲ್ಲರಿಗೂ ಸ್ಫೂರ್ತಿಯಾಗಿದ್ದು, ಅವರ ಹೋರಾಟವನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಬೇಕೆಂದರು.

ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೂಪಾ ಸೋಮಶೇಖರ್, ಉಪಾಧ್ಯಕ್ಷ ಡಿ.ಎಂ.ಹರೀಶ್, ಸದಸ್ಯರಾದ ಕೆ.ಜಿ.ಬಸವರಾಜ್, ಎನ್.ಎಂ.ಪಾಟೀಲ್, ಶ್ರೀಮತಿ ಆಶಾ ಅಣ್ಣಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ದೇವೇಂದ್ರಪ್ಪ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷರಾದ ಜಿ.ಪಿ.ಹನುಮಗೌಡ, ಎಂ.ಆರ್.ನಾಗರಾಜ್, ಸುನೀತಾ ನಾಗರಾಜ್, ಉಪಾಧ್ಯಕ್ಷೆ ಮಂಜುಳಾ ಮಾಲತೇಶ್, ಪಂಚಮಸಾಲಿ ಸಮಾಜದ ಮುದ್ದಪ್ಳ ಬಸವನಗೌಡ, ಮುದ್ದಪ್ಳ ಶಂಕ್ರಪ್ಪ, ಮುದ್ದಪ್ಳ ಶಿವಣ್ಣ, ಬನ್ನಿಕೋಡು ಪ್ರಕಾಶ್, ಗುರುರಾಜ್, ಪಿಡಿಓ ಉಮೇಶ್, ಕಾರ್ಯದರ್ಶಿ ಸುಜಾತ, ಬಿ.ಮೌನೇಶ್, ಬಸವರಾಜಯ್ಯ, ಮುತ್ತು ಶಾಲಾ ಶಿಕ್ಷಕರಾದ ಮಲ್ಲಿಕಾರ್ಜುನ್, ಲೋಕೇಶ್, ಶ್ರೀನಿವಾಸ್ ರೆಡ್ಡಿ, ಜಯಶ್ರೀ, ಕರಿಬಸಮ್ಮ ಭಾಗವಹಿಸಿದ್ದರು.

error: Content is protected !!