ಶ್ರೀ ರಾಮಕೃಷ್ಣ ಶಾಲೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ

ಶ್ರೀ ರಾಮಕೃಷ್ಣ ಶಾಲೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ

ದಾವಣಗೆರೆ, ಅ.23- ಡಿಸಿಎಂ ಟೌನ್‌ಶಿಪ್‌ನಲ್ಲಿರುವ ಶ್ರೀ ರಾಮ ಕೃಷ್ಣ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿ ಆಚರಿಸಲಾಯಿತು. ಸಹ ಶಿಕ್ಷಕಿ ಶ್ರೀಮತಿ ಅನಿತಾ ಮಾತನಾಡಿದರು. ವಿದ್ಯಾರ್ಥಿಗಳಾದ ಪರೀಜ್ಞಾ ಜಿ ಮತ್ತು ಬಿ.ಎಂ ತೇಜಸ್ವಿನಿ  ಕಿರು ಭಾಷಣ ಮಾಡಿದರು. ಮುಖ್ಯೋಪಾಧ್ಯಾಯ ಡಿ.ಸಿ ಸುರೇಶ್, ಸಹ ಶಿಕ್ಷಕಿಯರಾದ ಶೋಭಾ ಹುಲ್ಲುಮನಿ, ಕಾವ್ಯ, ಆಶಾ, ಮಹಾಲಕ್ಷ್ಮಿ, ಅನಿತಾ, ಕರಿಬಸಮ್ಮ, ಶ್ರೀದೇವಿ ಮತ್ತು ಶ್ರೀದೇವಿ, ಕಚೇರಿ ಸಿಬ್ಬಂದಿ ಅನುಸೂಯಮ್ಮ, ರಾಜೇಶ್ವರಿ, ಲಕ್ಷ್ಮವ್ವ ಮತ್ತಿತರರು ಹಾಜರಿದ್ದರು.   

error: Content is protected !!