ಕಸಾಪ ಹೆಸರಿಗೆ ಕಚೇರಿ : ಮನವಿ

ಕಸಾಪ ಹೆಸರಿಗೆ ಕಚೇರಿ : ಮನವಿ

ಹರಪನಹಳ್ಳಿ, ಅ.23- ಪಟ್ಟಣದ ಪುರಸಭೆ ವ್ಯಾಪ್ತಿಯ ಪ್ರವಾಸಿ ಮಂದಿರದ ಬಳಿ ಇರುವ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯನ್ನು  ಕನ್ನಡ ಸಾಹಿತ್ಯ ಪರಿಷತ್ತು ಹೆಸರಿಗೆ ಮಾಡಿಕೊಡುವಂತೆ ವಿಜಯನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಹರಪನಹಳ್ಳಿ ತಾಲ್ಲೂಕು ಕಸಾಪ  ಅಧ್ಯಕ್ಷ ಕೆ.ಉಚ್ಚೆಂಗೆಪ್ಪ,  ಹೊಸಪೇಟೆ ತಾಲ್ಲೂಕು  ಕಸಾಪ  ಅಧ್ಯಕ್ಷ ಗುಂಡಿ ಮಾರುತಿ ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕು   ಕಸಾಪ  ಅಧ್ಯಕ್ಷ  ಗೂಳೆಪ್ಪ ಮತ್ತು   ಸಾಹಿತಿ ಇಸ್ಮಾಯಿಲ್ ಎಲಿಗಾರ್ ಮತ್ತು ಇತರರು ಇದ್ದರು

error: Content is protected !!