ಕಾಸಲ್ ಅಮರ್‌ನಾಥ್‌ ಅವರಿಗೆ ಪ್ರಶಸ್ತಿ

ಕಾಸಲ್ ಅಮರ್‌ನಾಥ್‌ ಅವರಿಗೆ ಪ್ರಶಸ್ತಿ

ದಾವಣಗೆರೆ, ಅ. 23- ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ (ಶಿವಮೊಗ್ಗ), ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಶಿವಮೊಗ್ಗದಲ್ಲಿ ಈಚೆಗೆ ನಡೆದ ಕೃಷಿ – ತೋಟಗಾರಿಕೆ ಮೇಳ – 2024 ಪೌಷ್ಟಿಕ ಆಹಾರಕ್ಕಾಗಿ ವಿಕಸಿತ ಕೃಷಿ ಕಾರ್ಯಕ್ರಮದಲ್ಲಿ ನಗರದ ಕಾಸಲ್ ಗಿರ್ ಫಾರ್ಮ್ಸ್‌ನ ಕಾಸಲ್ ಅಮರ್‌ನಾಥ್ ಅವರಿಗೆ ಸಚಿವ ಮಧು ಬಂಗಾರಪ್ಪ ಅವರು ಪ್ರಶಸ್ತಿ ನೀಡಿ ಗೌರವಿಸಿದರು.

ಉತ್ತಮ ದೇಸಿ ಗಿರ್ ಹಸುಗಳನ್ನು ಮಾದರಿಯಾಗಿ ಸಾಕಾಣಿಕೆ ಮಾಡುವುದನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಕಾಸಲ್ ಅಮರ್‌ನಾಥ್ ಅವರು, ಕಳೆದ 20 ವರ್ಷಗಳಿಂದ ದಾವಣಗೆರೆ ತಾಲ್ಲೂಕಿನ ಹುಣಸೆಕಟ್ಟೆ ಮಂಡ್ಲೂರಿನಲ್ಲಿ ಕಾಸಲ್ ಗಿರ್ ಫಾರ್ಮ್ಸ್‌ ಅನ್ನು ಸಾವಯವ ರೀತಿಯಿಂದ ನಡೆಸಿಕೊಂಡು ಬರುತ್ತಿದ್ದು, ಇವರ ಈ ಕಾರ್ಯಕ್ಕೆ ಪ್ರಶಸ್ತಿ ದೊರೆತಿದೆ.

error: Content is protected !!