ಶಿಕ್ಷಕಿ ಮಂಜುಳಾ ಅವರಿಗೆ ಪ್ರಶಸ್ತಿ ಪ್ರದಾನ

ಶಿಕ್ಷಕಿ ಮಂಜುಳಾ ಅವರಿಗೆ ಪ್ರಶಸ್ತಿ ಪ್ರದಾನ

ದಾವಣಗೆರೆ, ಅ.20- ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ 11 ಸಮಿತಿಗಳಲ್ಲೊಂದಾದ ಕಲಾವಿದ ಶಿಕ್ಷಕರ ಸಮಿತಿಯ ದಾವಣಗೆರೆ ಜಿಲ್ಲೆಯ ಮುಖ್ಯಸ್ಥರೂ, ದಾವಣಗೆರೆ ದಕ್ಷಿಣ ವಲಯ  ಎಲ್ಲಮ್ಮ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಸಹ ಶಿಕ್ಷಕಿಯೂ ಆಗಿರುವ ಶ್ರೀಮತಿ ಮಂಜುಳಾ ಎಸ್. ಪಾಟೀಲ್ ಅವರಿಗೆ ರಾಜ್ಯಮಟ್ಟದ ಗುರುಭೂಷಣ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಸೂರ್ಯ ಫೌಂಡೇಶನ್ ಹಾಗೂ ಸ್ಪಾರ್ಕ್ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ವತಿಯಿಂದ ಬೆಂಗಳೂರಿನ ಚಿಕ್ಕಬಾಣಾವರದ ಹುರುಳಿ ಚಿಕ್ಕನಹಳ್ಳಿಯ ಇಂಡೋ ಗ್ಲೋಬ್ ಗ್ರೂಪ್ ಆಫ್ ಇನ್‌ಸ್ಟಿ ಟ್ಯೂಷನ್ ಸಭಾಭವನದಲ್ಲಿ ಕಳೆದ ವಾರ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಶೈಕ್ಷಣಿಕ ಸಮಾರಂಭದಲ್ಲಿ ಗುರುಭೂಷಣ ಪ್ರಶಸ್ತಿಯನ್ನು ಮಂಜುಳಾ ಪಾಟೀಲ್ ಅವರಿಗೆ ಪ್ರದಾನ ಮಾಡಲಾಯಿತು.  

ಇಂಡೋಗ್ಲೋಬ್ ಕಾಲೇಜಿನ ಸಂಸ್ಥಾಪಕ ಟಿ.ಎಂ. ಗೌಡ ಅವರ ಪತ್ನಿ ಶ್ರೀಮತಿ ಸಂಗೀತ, ಸೂರ್ಯ ಫೌಂಡೇಶನ್ ಸಂಸ್ಥಾಪಕ ಸೋಮೇಶ್ ನವೋದಯ, ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ಸಂಸ್ಥಾಪಕರೂ, ರಾಜ್ಯಾಧ್ಯಕ್ಷರೂ ಆದ ಪಿ. ಮಹೇಶ್, ಪ್ರಧಾನ ಕಾರ್ಯದರ್ಶಿ ಸಂತೋಷ್‌ ಕುಮಾರ್ ಬಂಡೆ, ರಾಜ್ಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ಗುರೂಜಿ, ಉಪಾಧ್ಯಕ್ಷ ವಿಜಿ ಅಗ್ರಹಾರ, 11 ಸಹಕಾರ ಸಮಿತಿಗಳ ಮುಖ್ಯಸ್ಥೆ ಶ್ರೀಮತಿ ಉಮಾ ಗುಡ್ಡದ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!