ಶ್ರಮಿಕ ವರ್ಗದವರಿಗೆ ಅಕ್ಕಿ ವಿತರಣೆ, ಅನ್ನ ಸಂತರ್ಪಣೆ

ಶ್ರಮಿಕ ವರ್ಗದವರಿಗೆ  ಅಕ್ಕಿ ವಿತರಣೆ, ಅನ್ನ ಸಂತರ್ಪಣೆ

ದಾವಣಗೆರೆ, ಅ.18- ದಾವಣಗೆರೆ ಲಯನ್ಸ್ ಕ್ಲಬ್ ವತಿಯಿಂದ ವಿಶ್ವ ಆಹಾರ ದಿನಾಚರಣೆ ಅಂಗವಾಗಿ ಶ್ರಮಿಕ ವರ್ಗದವರಿಗೆ ಇಂದು ಅಕ್ಕಿ ವಿತರಣೆ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಶ್ರೀ ಚೆನ್ನಬಸವೇಶ್ವರ ರೈಸ್ ಟೆಕ್ ಮಿಲ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳವಯ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ  ಕುಸುಮ ಶೆಟ್ಟಿ ಮಾತನಾಡಿ, ಆರ್ಥಿಕ ಅಭಿವೃದ್ಧಿಯಲ್ಲಿ ಶ್ರಮಿಕ ವರ್ಗದವರ ಪಾತ್ರವನ್ನು ಕೊಂಡಾಡಿದರು. 

ಲಯನ್ಸ್ ಕಾರ್ಯದರ್ಶಿ ಸಿ. ಅಜಯ್ ನಾರಾಯಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಯನ್ಸ್ ಉಪಾಧ್ಯಕ್ಷ ಮಹಾಂತೇಶ್ ಒಣರೊಟ್ಟಿ,  ಪರಶುರಾಮ್,  ಶರಣಪ್ಪ ಮತ್ತು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

error: Content is protected !!