ಮುಸ್ಲಿಂ ಧರ್ಮಗುರುಗಳ ಪ್ರತಿಭಟನೆ

ಮುಸ್ಲಿಂ ಧರ್ಮಗುರುಗಳ ಪ್ರತಿಭಟನೆ

ಹರಿಹರ, ಅ.15-  ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ಆಗುವಂತಹ ಭಾಷಣ ಮಾಡಿರುವ ಉತ್ತರ ಪ್ರದೇಶದ ಗೌಜಿಯಾಬಾದ್‌ ನಿವಾಸಿ ಯತಿ ನರಸಿಂಗಾನಂದ ಮಹಾರಾಜರ  ವಿರುದ್ದ ಕೂಡಲೇ   ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ಅಂಜುಮನ್ ಇಸ್ಲಾಮಿಯಾ ಸಮಿತಿ ವತಿಯಿಂದ ಪ್ರತಿಭಟನೆ ಮಾಡಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. 

ಮುಸ್ಲಿಂ  ಧರ್ಮ ಗುರುಗಳಾದ  ಶಹರ್ ಎ. ಖಾಜಿ ಮೌಲಾನ  ಸೈಯದ್ ಶಂಶುದ್ದೀನ್, ಅಂಜುಮನ್ ಇಸ್ಲಾಮಿಯ  ಅಧ್ಯಕ್ಷ ಸೈಯದ್ ಎಜಾಜ್,  ಸದಸ್ಯರಾದ ಎಂ. ಎಂ. ಬಿ.  ಫಾರೂಕ್, ಸೈಯದ್ ಆಸಿಫ್, ಫಯಾಜ್ ಅಹಮದ್, ಆರ್.ಸಿ. ಜಾವಿದ್, ಮುಜಾಮಿಲ್ ಬಿಲ್ಲು, ಮುಖಂಡರಾದ ಜಾಕೀರ್, ರೆಹಮತ್ ಇತರರು ಪಾಲ್ಗೊಂಡಿದ್ದರು.

error: Content is protected !!