ಗಾಯಕ ಟಿ.ಕೆ. ಜಾರ್ಜ್ ಇನ್ನಿಲ್ಲ

ಗಾಯಕ ಟಿ.ಕೆ. ಜಾರ್ಜ್ ಇನ್ನಿಲ್ಲ

ದಾವಣಗೆರೆ, ಅ.14- ಹಿರಿಯ ಸಂಗೀತ ಕಲಾವಿದರೂ,  ಚರ್ಚ್‌ನಲ್ಲಿ ಫಾದರ್ ಆಗಿದ್ದ ಟಿ.ಕೆ. ಜಾರ್ಜ್ ಅವರು ಇಂದು ನಿಧನರಾದರು. 

ನಗರದ ಭಾರತಿ ವಾದ್ಯ ವೃಂದದಲ್ಲಿ ಹಲವಾರು ವರ್ಷಗಳ ಕಾಲ ಗಾಯಕರಾಗಿದ್ದ ಜಾರ್ಜ್, ಇತ್ತೀಚಿನ ಕೆಲವು ವರ್ಷಗಳಿಂದ ಅಧ್ಯಾತ್ಮದತ್ತ ಒಲವು ತೋರಿ ಚರ್ಚ್‌ನಲ್ಲಿ ಫಾದರ್ ಆಗಿದ್ದರು.

ಸುಮಾರು 3 ದಶಕಗಳ ಕಾಲ ಭಾರತಿ ವಾದ್ಯ ವೃಂದದಲ್ಲಿ ಕಲಾವಿದರಾಗಿ ನಾಡಿನಾದ್ಯಂತ ಹೆಸರು ಮಾಡಿದ್ದ ಅವರು, ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ವಿಷ್ಣುವರ್ಧನ್ ಅಭಿನಯದ ಚಲನಚಿತ್ರಗಳಲ್ಲೂ ಅವರೊಂದಿಗೆ ಅಭಿನಯಿಸಿದ್ದರು. 

`ಜಿಮ್ಮಿಗಲ್ಲು’ ಚಿತ್ರದ `ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ …’  ಹಾಡನ್ನು ಜಾರ್ಜ್‌ ಅವರು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಪುಟ್ಟಣ್ಣ ಕಣಗಾಲ್ ಸ್ಮರಣಾರ್ಥ ವಾದ್ಯ ಮಂಟಪವನ್ನು ಸ್ಥಾಪಿಸುವಂತೆ ಜಾರ್ಜ್ ಅವರ ನೇತೃತ್ವದಲ್ಲಿ ನಡೆಸಿದ ಹೋರಾಟದ ಪ್ರತಿಫಲವಾಗಿ ದಾವಣಗೆರೆ ನಗರಸಭೆಯು  ನಗರಸಭೆ ಆವರಣದಲ್ಲಿ ವಾದ್ಯ ಮಂಟಪವನ್ನು ಸ್ಥಾಪಿಸಿ ಪ್ರತಿ ತಿಂಗಳು ವಾದ್ಯ ಗೋಷ್ಠಿಗಳನ್ನು ನಡೆಸುತ್ತಿತ್ತು. ಆ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ನಡೆದಿತ್ತು.

error: Content is protected !!