ನಗರದ ಕಾಂಗ್ರೆಸ್ ಮುಖಂಡ ಈಶ್ವರಪ್ಪ ನಿಧನ

ನಗರದ ಕಾಂಗ್ರೆಸ್ ಮುಖಂಡ ಈಶ್ವರಪ್ಪ ನಿಧನ

ದಾವಣಗೆರೆ, ಅ.14-ಆಶ್ರಯ ಸಮಿತಿ ಮಾಜಿ ಸದಸ್ಯರೂ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಮಾಜಿ ಉಪಾಧ್ಯಕ್ಷರೂ ಆದ ಭೈರಜ್ಜರ ಬಿ.ಎಂ.ಈಶ್ವರಪ್ಪ ಅವರು ನಿನ್ನೆ ರಾತ್ರಿ ನಿಧನರಾದರು. 

ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರಿಗೆ ಸುಮಾರು 63 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಅಳಿಯ ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ನಾಳೆ ದಿನಾಂಕ 15ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಸ್ಥಳೀಯ ಗಾಂಧಿನಗರದ ಶ್ರೀ ಹೊರಟ್ಟಿ ದುರ್ಗಾಂಬಿಕಾ ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ಶ್ರೀ ಗುರು ರಾಮದಾಸ ಸ್ವಾಮಿ ಅಧ್ಯಾತ್ಮಿಕ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಈಶ್ವರಪ್ಪ, ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಸದಸ್ಯರೂ, ಮಲ್ಲಿಕಾರ್ಜುನ ಬಳಕೆದಾರರ ಸೊಸೈಟಿ ಅಧ್ಯಕ್ಷರೂ ಆಗಿದ್ದರು. 

error: Content is protected !!