ಪಾಂಡುರಂಗನ ದರ್ಶನ ಮಾಡಲು ಭಕ್ತರಿಂದ ಕಾಲ್ನಡಿಗೆ

ಪಾಂಡುರಂಗನ ದರ್ಶನ ಮಾಡಲು ಭಕ್ತರಿಂದ ಕಾಲ್ನಡಿಗೆ

ಭರಮಸಾಗರ, ಅ.14- ಇಲ್ಲಿಗೆ ಸಮೀಪದ ನಂದಿಹಳ್ಳಿ ಗ್ರಾಮದ ಭಕ್ತರು  ಶ್ರೀ ಪಾಂಡುರಂಗ ವಿಠಲ ದೇವರ ದರ್ಶನ ಪಡೆಯಲು ಪಾದಯಾತ್ರೆ ಮೂಲಕ ನಿನ್ನೆ ಫಂಡರಾಪುರಕ್ಕೆ ತೆರಳಿದರು. ಬರುವ ನವೆಂಬರ್ 12 ರ ಏಕಾದಶಿ ದಿನದಂದು ಭಕ್ತರು ದೇವರ ದರ್ಶನ ಮಾಡಲಿದ್ದಾರೆ.

ಭರಮಸಾಗರದ `ಜನತಾವಾಣಿ’ ವರದಿಗಾರ ಬಿ.ಜೆ. ಅನಂತಪದ್ಮನಾಭರಾವ್‌ ಅವರು ಪಾದಯಾತ್ರೆ ಕೈಗೊಂಡಿರುವ ಭಕ್ತರಿಗೆ ಪುಷ್ಪಮಾಲೆ ಹಾಕುವುದರ ಮೂಲಕ ಶುಭ ಕೋರಿದರು.

error: Content is protected !!