ಪೌರ ಕಾರ್ಮಿಕರಿಗೆ ದಸರಾ ಉಡುಗೊರೆ ನೀಡಿದ ಪಾಲಿಕೆ ಸದಸ್ಯ

ಪೌರ ಕಾರ್ಮಿಕರಿಗೆ ದಸರಾ ಉಡುಗೊರೆ ನೀಡಿದ ಪಾಲಿಕೆ ಸದಸ್ಯ

ದಾವಣಗೆರೆ, ಅ.13- ನಗರದ ಎಂಸಿಸಿ `ಬಿ’ ಬ್ಲಾಕ್‌ನಲ್ಲಿ ವಿಜಯದಶಮಿ ಹಾಗೂ ದಸರಾ ಪ್ರಯುಕ್ತ ಪೌರ ಕಾರ್ಮಿಕರಿಗೆ ಮಹಾನಗರಪಾಲಿಕೆ ಸದಸ್ಯ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ನೇತೃತ್ವದಲ್ಲಿ ಉಡುಗೊರೆ ನೀಡಿ ಗೌರವಿಸಲಾಯಿತು. 

ಬಳಿಕ ಮಾತನಾಡಿದ ಮಂಜುನಾಥ್, ಪೌರಕಾರ್ಮಿಕರು ಮಳೆ, ಗಾಳಿ, ಚಳಿ ಎನ್ನದೇ ನಗರದ ಸ್ವಚ್ಛತೆಗೆ ಶ್ರಮಿಸುತ್ತಾರೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡುವ ಜೊತೆಗೆ ನಗರ ಸ್ವಚ್ಛತೆಯಾಗಿರಲು ಅವರೇ ಕಾರಣ. ಅವರಿಗೆ ಗೌರವಿಸಬೇಕೆಂಬ ಸದುದ್ದೇಶದಿಂದ ಉಚಿತವಾಗಿ ಉಡುಗೊರೆ ನೀಡಿ ಅಭಿನಂದಿಸಲಾಗುತ್ತದೆ. ಕಳೆದ ವರ್ಷವೂ ಪೌರಕಾರ್ಮಿಕರಿಗೆ ಸನ್ಮಾನಿಸಲಾಗಿತ್ತು. ಈ ವರ್ಷವೂ ಈ ಪರಂಪರೆ ಮುಂದುವರೆದಿದೆ ಎಂದು ತಿಳಿಸಿದರು. 

ಪೌರ ಕಾರ್ಮಿಕರ ಶ್ರಮದಿಂದಲೇ 38ನೇ ವಾರ್ಡ್ ಎಂ.ಸಿ.ಸಿ. `ಬಿ’ ಬ್ಲಾಕ್ ಇಷ್ಟೊಂದು ಸ್ವಚ್ಛವಾಗಿರಲು ಕಾರಣ. ತಮಗೆ ವಹಿಸಿದ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾರೆ. ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಸ್ವಚ್ಛತೆ ವಿಚಾರದಲ್ಲಿ ಜನರ ಸಮಸ್ಯೆಗೆ ಕೂಡಲೇ ಸ್ಪಂದಿಸುತ್ತಾರೆ. ಪೌರಕಾರ್ಮಿಕರ ಕಾರ್ಯಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಬೇಕು ಎಂದು ಹೇಳಿದರು. 

ಉಡುಗೊರೆ ಸ್ವೀಕರಿಸಿದ ಪೌರಕಾರ್ಮಿಕರು, ಪ್ರತಿವರ್ಷವೂ ನಮ್ಮನ್ನು ಗುರುತಿಸಿ, ಉಡುಗೊರೆ ನೀಡುವ ಜೊತೆಗೆ ಅಭಿನಂದನೆ ಸಲ್ಲಿಸುತ್ತಿರುವ ಗಡಿಗುಡಾಳ್ ಮಂಜುನಾಥ್‌ರ ಕಾರ್ಯವೈಖರಿಗೆ ಧನ್ಯವಾದ ಸಲ್ಲಿಸುತ್ತೇವೆ ಎಂದು ತಿಳಿಸಿದರು.

error: Content is protected !!