ಹರಪನಹಳ್ಳಿ : ಇಂದಿನಿಂದ ಶ್ರೀ ಶಿವಯೋಗಿ ಹಾಲಸ್ವಾಮೀಜಿ ರಥೋತ್ಸವ

ಹರಪನಹಳ್ಳಿ : ಇಂದಿನಿಂದ ಶ್ರೀ ಶಿವಯೋಗಿ ಹಾಲಸ್ವಾಮೀಜಿ ರಥೋತ್ಸವ

ಹರಪನಹಳ್ಳಿ, ಅ.13- ಭಾವೈಕತೆಯ  ಸಾರುವ  ಸದ್ಗುರು ಶ್ರೀ ಶಿವಯೋಗಿ ಹಾಲಸ್ವಾಮಿಗಳವರ ಜಾತ್ರಾ  ಮಹೋತ್ಸವವು ಪಟ್ಟಣದ ವಾಲ್ಮೀಕಿ ನಗರದಲ್ಲಿ  ನಾಳೆ ದಿನಾಂಕ 14ರ ಸೋಮವಾರದಿಂದ ಮೂರು ದಿನಗಳ ಕಾಲ ಸಂಭ್ರಮದಿಂದ ನೆರವೇರಲಿದೆ ಎಂದು  ಹಾಲಸ್ವಾಮಿ ಮಠದ ಶ್ರೀ ಸಣ್ಣ ಹಾಲಸ್ವಾಮಿಗಳು ತಿಳಿಸಿದರು.

ಹಾಲಸ್ವಾಮಿ ಮಠದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆಗ್ಗಿನಮಠದ ಶ್ರೀ ವರಸದ್ಯೊಜಾತ ಶಿವಾಚಾರ್ಯ ಮಹಾಸ್ವಾಮೀಜಿ,  ಸುಕ್ಷೇತ್ರ ರಾಂಪುರ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಸಾನ್ನಿಧ್ಯ  ವಹಿಸಲಿದ್ದಾರೆ.

ನಾಳೆ ದಿನಾಂಕ 14 ರಂದು ರಾತ್ರಿ 11 ಗಂಟೆಗೆ ಮುಳ್ಳು ಗದ್ದಿಗೆ ಉತ್ಸವ 15ರಂದು ಸಂಜೆ 5 ಗಂಟೆಗೆ ರಥೋತ್ಸವ ಜರುಗಲಿದೆ. 16ರ ಬುಧವಾರ ಸಂಜೆ 5 ಗಂಟೆಗೆ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಲಿದೆ.

ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ವಾಲ್ಮೀಕಿ ನಾಯಕ ಸಮಾಜದ ಉಪಾಧ್ಯಕ್ಷ ಸುರೇಶ್ ಮಂಡಕ್ಕಿ, ಮುಖಂಡರಾದ  ಟಿ. ತಿರುಪತಿ, ಪಟ್ನಾಮದ  ಹಾಲ ಸಿದ್ದಪ್ಪ,  ನಿಟ್ಟೂರು ದೊಡ್ಡ ಹಾಲಪ್ಪ, ರಾಯದುರ್ಗದ ದುರುಗಪ್ಪ,  ಕಾಗೇರ್ ತಿಮ್ಮಪ್ಪ, ರಾಜಪ್ಪ, ದ್ಯಾಮಜ್ಜಿ ಪರುಸಪ್ಪ, ಗೋಕರ್ಣ ಸಿ ಚಂದ್ರು ಸೇರಿದಂತೆ ಇತರರು ಇದ್ದರು.

error: Content is protected !!