ಹೊಸ ಭರಂಪುರದಲ್ಲಿ ಅನ್ನ ಸಂತರ್ಪಣೆ

ಹೊಸ ಭರಂಪುರದಲ್ಲಿ ಅನ್ನ ಸಂತರ್ಪಣೆ

ಹರಿಹರ, ಅ.7- ನಗರದ ಹೊಸಭರಂಪುರ ಬಡಾವಣೆಯ ಶ್ರೀ ಗ್ರಾಮ ದೇವತೆ ಊರಮ್ಮ ದೇವಿ ಮತ್ತು ಹೊಸ ಭರಂಪುರ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪನೆ ಮಾಡಿರುವ ಹರಿಹರ ಕಾ ರಾಜಾ ಗಣಪತಿ ದಿನಾಂಕ 16 ರಂದು ನಡೆಯುವ ವಿಸರ್ಜನೆ ಪ್ರಯುಕ್ತ ಇಂದು ಅನ್ನ ಸಂತರ್ಪಣೆ ಮಾಡಲಾಯಿತು.

ಈ ವೇಳೆ ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್, ಪತ್ರಕರ್ತರಿಗೆ,  ವಿವಿಧ ಸಂಘಟನೆ ಮುಖಂಡರಿಗೆ ಹೊಸಭರಂಪುರ ಯುವಕರ ಸಂಘದಿಂದ ಸನ್ಮಾನಿಸಿ ಗೌರವಿಸಿದರು.

ನಗರಸಭೆ ಸದಸ್ಯೆ ನಿಂಬಕ್ಕ ಚಂದಾಪೂರ್, ಹೊಸಭರಂಪುರ ಯುವಕ ಸಂಘದ ಅಧ್ಯಕ್ಷ ಸುರೇಶ್ ಚಂದಪೂರ್,  ಊರಮ್ಮ ದೇವಿ ದೇವಸ್ಥಾನ ಸಮಿತಿ ಗೌರವ ಅಧ್ಯಕ್ಷ ಶಿವಮೂರ್ತಪ್ಪ ಪೂಜಾರ್, ಉಪಾಧ್ಯಕ್ಷ ಎಂ‌. ಚಿದಾನಂದ ಕಂಚಿಕೇರಿ, ಹಣಿಗಿ ಸುರೇಶ್, ಪ್ರಧಾನ ಕಾರ್ಯದರ್ಶಿ ಕೆ.ಬಿ. ರಾಜಶೇಖರ್, ಖಜಾಂಚಿ ಬೆಣ್ಣೆ ರೇವಣಸಿದ್ದಪ್ಪ, ಸಹ ಕಾರ್ಯದರ್ಶಿಗಳಾದ ಕೆ.ಜಿ. ಗುತ್ಯಪ್ಪ, ರಾಘು ಚೌಗಲೆ ಮತ್ತಿತರರು ಭಾಗವಹಿಸಿದ್ದರು.

error: Content is protected !!