ಉಕ್ಕಡಗಾತ್ರಿ ಬಳಿ ಹೊಸ ಸೇತುವೆ ನಿರ್ಮಾಣ: ಸತೀಶ್‌ ಜಾರಕಿಹೊಳಿ ಭರವಸೆ

ಉಕ್ಕಡಗಾತ್ರಿ ಬಳಿ ಹೊಸ ಸೇತುವೆ  ನಿರ್ಮಾಣ: ಸತೀಶ್‌ ಜಾರಕಿಹೊಳಿ ಭರವಸೆ

ಮಲೇಬೆನ್ನೂರು, ಅ.7- ಸುಕ್ಷೇತ್ರ ಉಕ್ಕಡಗಾತ್ರಿ ಮತ್ತು ಮಾಳನಾಯಕನಹಳ್ಳಿ ನಡುವೆ ಹೊಸ ಸಂಪರ್ಕ ಸೇತುವೆ ನಿರ್ಮಿಸುವುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಭರವಸೆ ನೀಡಿದ್ದು, ಹಣಕಾಸು ಇಲಾಖೆಯ ಅನುಮೋದನೆ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ ಎಂದು ಉಕ್ಕಡಗಾತ್ರಿ ಶ್ರೀ ಗುರು ಕರಿಬಸವೇಶ್ವರ ಗದ್ದಿಗೆ ಟ್ರಸ್ಟ್‌ ಕಮಿಟಿ ನಿರ್ದೇಶಕ ಜಿಗಳಿ ಇಂದೂಧರ್‌ ತಿಳಿಸಿದರು.

ಈ ಸಂಬಂಧ ಸೋಮವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿದಾಗ, ಈ ಹೊಸ ಸೇತುವೆ ನಿರ್ಮಾಣ ಸೇರಿದಂತೆ ರಾಜನಹಳ್ಳಿ ಶ್ರೀಗಳೂ, ಜಿಲ್ಲಾ ಸಚಿವರು, ಸಂಸದರು ಒತ್ತಡ ಹಾಕಿದ್ದಾರೆ ಎಂದರು.

ಪ್ರತಿ ವರ್ಷ ಮಳೆಗಾಲದಲ್ಲಿ ತುಂಗಭದ್ರಾ ನದಿ ಹಿನ್ನೀರಿನಲ್ಲಿ ಈ ಸೇತುವೆ ಮುಳುಗಡೆಯಾಗಿ ರಸ್ತೆ ಸಂಪರ್ಕ ಬಂದ್‌ ಆಗುತ್ತಿರುವ ವಿಷಯವನ್ನು ಸಚಿವರ ಗಮನಕ್ಕೆ ರಾಜನಹಳ್ಳಿ ಶ್ರೀಗಳು ಮತ್ತು ಹೊದಿಗೆರೆ ರಮೇಶ್‌, ಜಿಗಳಿಯ ಜಿ. ಆನಂದಪ್ಪ, ಪತ್ರಕರ್ತ ಪ್ರಕಾಶ್‌ ಅವರ ಮೂಲಕ ತಂದು ಒತ್ತಡ ಹಾಕಿದ್ದರ ಪರಿಣಾಮವಾಗಿ ಸಚಿವರು ಹೊಸ ಸೇತುವೆ ನಿರ್ಮಾಣಕ್ಕೆ ಸಮ್ಮತಿ ಸೂಚಿಸಿದ್ದಾರೆಂದು ಇಂದೂಧರ್‌ ಸಂತಸ  ವ್ಯಕ್ತಪಡಿಸಿದ್ದಾರೆ.

error: Content is protected !!