ದಾವಣಗೆೇರೆ, ಅ.6- ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ 155ನೇ ಹಾಗೂ 120 ನೇ ಜನ್ಮ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ವೀರೇಶಕುಮಾರ್ ಅವರು ಮಹನೀಯರು ಅಹಿಂಸೆ ಮೂಲಕ ಬ್ರಿಟಿಷರ ಮುಷ್ಠಿಯಿಂದ ಸ್ವಾತಂತ್ರ್ಯ ಪಡೆದುಕೊಂಡ ಬಗೆ ಹಾಗೂ ಗಾಂಧೀಜಿಯವರು ಜೀವನದಲ್ಲಿ ನಂಬಿದ 7 ಸಾಮಾಜಿಕ ತತ್ವಗಳ ಕುರಿತ ಮಾಹಿತಿಯನ್ನು ಸಭೆಗೆ ಹಂಚಿಕೊಂಡರು.
ಸ್ಮಾರ್ಟ್ಸಿಟಿ ಕಚೇರಿಯಲ್ಲಿ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ
