ಶಿಕ್ಷಕ ಬಿ.ಅರುಣ್‌ಗೆ ಇಂದು ರಾಷ್ಟ್ರೀಯ ವಿಶ್ವಕರ್ಮ ರತ್ನ ಪ್ರಶಸ್ತಿ

ಶಿಕ್ಷಕ ಬಿ.ಅರುಣ್‌ಗೆ ಇಂದು  ರಾಷ್ಟ್ರೀಯ ವಿಶ್ವಕರ್ಮ ರತ್ನ ಪ್ರಶಸ್ತಿ

ಮಲೇಬೆನ್ನೂರು ಸಮೀಪದ ಹಿಂಡಸಘಟ್ಟ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಬಿ. ಅರುಣ್ ಕುಮಾರ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡಿರುವ ಸಾಧನೆಯನ್ನು ಗುರುತಿಸಿ, `ರಾಷ್ಟ್ರೀಯ ವಿಶ್ವಕರ್ಮ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

ನವದೆಹಲಿಯಲ್ಲಿ ಇಂದು ನಡೆಯಲಿರುವ ವಿಶ್ವಕರ್ಮ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇಡೀ ಭಾರತ ದೇಶದಾದ್ಯಂತ 25 ಸಾಧಕರನ್ನು ಗುರುತಿಸಿದ್ದು, ಅದರಲ್ಲಿ ಶಿಕ್ಷಕ ಬಿ ಅರುಣಕುಮಾರ್ ಒಬ್ಬರಾಗಿದ್ದಾರೆ. ಇದೇ ಸೆ.5 ರಂದು ನಡೆದ ಶಿಕ್ಷಕ ದಿನಾಚರಣೆಯಲ್ಲಿ ಕರ್ನಾಟಕ ಸರ್ಕಾರವು `ಉತ್ತಮ ರಾಜ್ಯ ಶಿಕ್ಷಕ’ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

error: Content is protected !!