ಎಸ್‌.ಎಸ್‌.ಕೆ. ಸಮಾಜಕ್ಕೆ ಶಶಿಕುಮಾರ್ ರಾಜ್ಯಾಧ್ಯಕ್ಷ

ಎಸ್‌.ಎಸ್‌.ಕೆ. ಸಮಾಜಕ್ಕೆ ಶಶಿಕುಮಾರ್ ರಾಜ್ಯಾಧ್ಯಕ್ಷ

ಹಾವೇರಿ, ಸೆ. 28 – ರಾಣೇಬೆನ್ನೂರಿನ ಶಕ್ತಿಧಾಮ ಬಡಾವಣೆಯಲ್ಲಿ ನಡೆದ ರಾಜ್ಯ ಎಸ್‌ಎಸ್‌ಕೆ ಸಮಾಜದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸಭಾಧ್ಯಕ್ಷ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಸಮ್ಮುಖದಲ್ಲಿ ತಪೋವನ ಸಂಸ್ಥೆಯ ಛೇರ್ಮನ್ ಶಶಿಕುಮಾರ್ ಮೆಹರ್ವಾಡೆ ಅವರನ್ನು ರಾಜ್ಯ ಎಸ್‌ಎಸ್‌ಕೆ ಸಮಾಜದ ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಅಶೋಕ್ ಕಾಟ್ವೆ, ಹು-ಧಾ ಕೇಂದ್ರ ಪಂಚಾಯಿತಿ ಅಧ್ಯಕ್ಷ ಸತೀಶ್ ಮೆಹರ್ವಾಡೆ, ಅಖಿಲ ಭಾರತ ಎಸ್‌ಎಸ್‌ ಕೆ ಸಮಾಜದ ಪ್ರಧಾನ ಕಾರ್ಯದರ್ಶಿ ಶ್ಯಾಮ ಕಬಾಡಿ, ಎಸ್‌ಎಸ್‌ಕೆ ಬ್ಯಾಂಕ್ ಅಧ್ಯಕ್ಷ ವಿಠಲ್ ಲದ್ವಾ, ಟಿ.ಎಂ. ಮೆಹರ್ವಾಡೆ, ನೀಲಕಂಠಸಾ ಜಡಿ, ನಾರಾಯಣಸಾ ನಿರಂಜನ, ನಾಗೇಶ್ ಕಲ್ಬುರ್ಗಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್‌.ಡಿ. ಕಾಟ್ವಾ, ಮಾರುತಿರಾವ್ ಪವಾರ್ ಸೇರಿದಂತೆ ಇತರರಿದ್ದರು.

error: Content is protected !!