ಹಿಂದೂ ಮಹಾ ಗಣಪತಿಯ ವಿಸರ್ಜನೆ ನಿಮಿತ್ತ್ಯ ಬೃಹತ್ ಬೈಕ್ ರ‍್ಯಾಲಿ ಯಶಸ್ವಿ

ಹಿಂದೂ ಮಹಾ ಗಣಪತಿಯ ವಿಸರ್ಜನೆ ನಿಮಿತ್ತ್ಯ ಬೃಹತ್ ಬೈಕ್ ರ‍್ಯಾಲಿ ಯಶಸ್ವಿ

ಹರಿಹರ, ಸೆ.27- ನಗರದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಪ್ರತಿಷ್ಟಾಪನೆಗೊಂಡ ಹಿಂದೂ ಮಹಾ ಗಣಪತಿಯ ವಿಸರ್ಜನೆ ನಿಮಿತ್ತ್ಯ ಶುಕ್ರವಾರ ನಗರದಲ್ಲಿ ಬೃಹತ್ ಬೈಕ್ ರ‍್ಯಾಲಿ ಜರುಗಿತು.

ವಿಘ್ನೇಶ್ವರನಿಗೆ ಜೈಕಾರ ಹಾಕುತ್ತಾ ಸಮಿತಿಯ ಪದಾಧಿಕಾರಿಗಳು ಬೈಕ್‌     ರ‍್ಯಾಲಿಗೆ ಚಾಲನೆ ನೀಡಿದರು.

ಪಿಎಸ್ಐ ಶ್ರೀಪತಿ ಗನ್ನಿ, ಎಎಸ್ಐ ರಾಜಶೇಖರ ಮನಸೂರು ಮತ್ತು ಸಿಬ್ಬಂದಿ ರವಿಕುಮಾರ್, ತಿಪ್ಪೇಸ್ವಾಮಿ, ಸಿದ್ದೇಶ್ ತಂಡ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು.

ಈ ವೇಳೆ ಹಿಂದೂ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಬಸವನಗೌಡ, ಜಾಗರಣ ವೇದಿಕೆಯ ದಿನೇಶ್, ಚಂದನ್ ಮೂರ್ಕಲ್, ರಟ್ಟಿಹಳ್ಳಿ ಮಂಜುನಾಥ್, ಸ್ವಾತಿ ಹನುಮಂತ್, ಮಹೇಶ್, ರವಿಕುಮಾರ್, ಅದ್ವೈತ ಶಾಸ್ತ್ರಿ, ರವಿ ರಾಯ್ಕರ್, ತುಳಜಪ್ಪ ಭೂತೆ, ಹೆಚ್. ಮಂಜಾನಾಯ್ಕ್, ಗಿರೀಶ್, ಕುಮಾರ್, ಸುನಾಮಿ ರಮೇಶ್, ಶಿವಕುಮಾರ್, ಆದರ್ಶ, ದರ್ಶನ್, ಪ್ರೇಮ್, ಸಂಜಯ್ ಗೌಡ, ಗಣೇಶ್, ತಾವರಗಿ ರವಿಕುಮಾರ್, ಚಂದ್ರಕಾಂತ ಗೌಡ, ಬಾಬು ಮತ್ತಿತರರಿದ್ದರು.

error: Content is protected !!