ನವೀಕೃತ ಶ್ರೀ ಬಕ್ಕೇಶ್ವರ ಮಹಾಸ್ವಾಮಿ ಕಲ್ಯಾಣ ಮಂಟಪದ ಪ್ರಾರಂಭೋತ್ಸವ

ನವೀಕೃತ ಶ್ರೀ ಬಕ್ಕೇಶ್ವರ ಮಹಾಸ್ವಾಮಿ  ಕಲ್ಯಾಣ ಮಂಟಪದ ಪ್ರಾರಂಭೋತ್ಸವ

ದಾವಣಗೆರೆ, ಸೆ.26- ನಗರದ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿ ಅತ್ಯಾಧುನಿಕವಾಗಿ ನವೀಕೃತಗೊಂಡಿರುವ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ  ಮಹಾಸ್ವಾಮಿ ಕಲ್ಯಾಣ ಮಂಟಪದ ಪ್ರಾರಂಭೋತ್ಸವವು ಮೊನ್ನೆ ಹೋಮ, ಪೂಜಾದಿಗಳ ಮೂಲಕ ನೆರವೇರಿತು. 

ಆಡಳಿತ ಮಂಡಳಿಯ ಪ್ರಮುಖರಾದ ಮಾಗಾನಹಳ್ಳಿ ಶಿವಾನಂದಪ್ಪ,  ಡಾ. ಅಥಣಿ ಎಸ್. ವೀರಣ್ಣ ದಂಪತಿ, ಬಾದಾಮಿ ರುದ್ರೇಶ್, ಮಾಗಾನಹಳ್ಳಿ ಜಯದೇವಪ್ಪ, ವಿನಯ್ ಮಾಗಾನಹಳ್ಳಿ, ಕಣವಿ ನಟರಾಜ್, ಆಲದಹಳ್ಳಿ ಸಿದ್ದರಾಮೇಶ್ವರ, ಯುವರಾಜ್ ಮಾಗನಹಳ್ಳಿ, ಎಂ.ಸಿ. ಗುರು ದಂಪತಿ,  ಮಾಗಾನಹಳ್ಳಿ ಚನ್ನಬಸಪ್ಪ, ಮುಂತಾದವರು ಭಾಗವಹಿಸಿದ್ದರು.

ದೇವರ ಮನಿ ಶಿವಕುಮಾರ್ ಮೊದಲಾದವರು ಆಗಮಿಸಿದ್ದರು. ವೇದಮೂರ್ತಿ ವಿಜಯಾನಂದ ಶಾಸ್ತ್ರಿ, ಬಸಯ್ಯ ಸಂಗಡಿಗರು ಹೋಮ, ಪೂಜಾದಿಗಳನ್ನು  ನೆರವೇರಿಸಿದರು. ಹಿರಿಯ ಪತ್ರಕರ್ತ
ಎಚ್.ಬಿ. ಮಂಜುನಾಥ ವಿಧಿವಿಧಾನಗಳ ಅರ್ಥ ವಿವರಿಸಿದರು. ನವೀಕರಣ ಕಾರ್ಯದಲ್ಲಿ ದುಡಿದವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

error: Content is protected !!