ಅತೀ ಹೆಚ್ಚು ಹಾಲು ಸರಬರಾಜು ಮಾಡಿದ ಕಮಲಾಕ್ಷಿ ಶ್ರೀಕರ್‌ಗೆ ಪ್ರಶಸ್ತಿ

ಅತೀ ಹೆಚ್ಚು ಹಾಲು ಸರಬರಾಜು ಮಾಡಿದ ಕಮಲಾಕ್ಷಿ ಶ್ರೀಕರ್‌ಗೆ ಪ್ರಶಸ್ತಿ

ದಾವಣಗೆರೆ, ಸೆ. 25-  ಜಿಲ್ಲೆಯಲ್ಲಿ ಅತೀ ಹೆಚ್ಚು ಹಾಲು ಸರಬರಾಜು ಮಾಡಿದ ಮಹಿಳಾ ಸದಸ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಗರದ ಶ್ರೀಮತಿ ಕಮಲಾಕ್ಷಿ ಶ್ರೀಕರ್  ಅವರಿಗೆ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಪ್ರಶಸ್ತಿ ನೀಡಿದೆ. ಈಚೆೆಗೆ ನಡೆದ ಒಕ್ಕೂಟದ ಕಾರ್ಯಕ್ರಮದಲ್ಲಿ ಕಮಲಾಕ್ಷಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾಧರ್, ಚೇತನ್ ಎಸ್. ನಾಡಿಗೇರ್, ಹೆಚ್.ಕೆ. ಬಸಪ್ಪ, ಬಿ.ಜಿ.ಬಸವರಾಜಪ್ಪ, ಎಸ್.ಜಿ. ಶೇಖರ್, ಡಾ. ಕೆ.ಆರ್. ಮುರುಳೀಧರ್, ಮಂಜುನಾಥ್ ಹೆಚ್.ಎಂ., ಶ್ರೀಮತಿ ಚೇತನ ರುದ್ರೇಶ್ ಉಪಸ್ಥಿತರಿದ್ದರು.

error: Content is protected !!