ಕೊಮಾರನಹಳ್ಳಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ

ಕೊಮಾರನಹಳ್ಳಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ

ಮಲೇಬೆನ್ನೂರು, ಸೆ.25- ಕೊಮಾರನಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ತಾ. ಮಟ್ಟದ ಸಮಾವೇಶವನ್ನು ಯೋಜನೆಯ ಜಿಲ್ಲಾ ನಿರ್ದೇಶಕ ಎಂ.ಲಕ್ಷ್ಮಣ ಉದ್ಘಾಟಿಸಿದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಜಿ.ಮಂಜುನಾಥ್ ಪಟೇಲ್, ಜಿಗಳಿ ಪ್ರಕಾಶ್, ಕೊಕ್ಕನೂರು ಹನುಮಂತರಾಯ, ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ, ವಲಯ ಮೇಲ್ವಿಚಾರಕರಾದ ರಕ್ಷಿತಾ, ಸಂಪತ್ ಲಕ್ಷ್ಮಿ, ರಂಜಿತಾ, ಸಂತೋಷಿನಿ, ಮಾರುತಿಗೌಡ, ಹರೀಶ್, ಚಂದ್ರಪ್ಪ, ಕೃಷಿ ಮೇಲ್ವಿಚಾರಕ ಮನೋಹರ್, ಜ್ಞಾನ ವಿಕಾಸ ಸಮಾನ್ವಯಾಧಿಕಾರಿ ಸವಿತಾ, ಕಚೇರಿಯ ಹಣಕಾಸು ಪ್ರಬಂಧಕ ಶ್ರೀಕಾಂತ್, ಆಡಳಿತ ಪ್ರಬಂಧಕಿ ಐಶ್ವರ್ಯ, ಸಂಘಗಳ ಲೆಕ್ಕ ಪರಿಶೋಧಕಿ ಆಶಾ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರವಚನಕಾರ ಸಿರಿಗೆರೆ ಸಿದ್ದೇಶ್ ವಿಶೇಷ ತರಬೇತಿ ನೀಡಿದರು.

error: Content is protected !!