ನಗರದಲ್ಲಿ ಇಂದಿನಿಂದ ಶ್ರೀ ಜಯದೇವ ಲೀಲೆ ಪ್ರವಚನ

ನಗರದಲ್ಲಿ ಇಂದಿನಿಂದ  ಶ್ರೀ ಜಯದೇವ ಲೀಲೆ ಪ್ರವಚನ

ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗ ಳವರ 68ನೇ ವರ್ಷದ ಸ್ಮರಣೋತ್ಸವ ಅಂಗವಾಗಿ ಶ್ರೀ ಜಯದೇವ ಲೀಲೆ ಪ್ರವಚನವು ಇಂದಿನಿಂದ ಇದೇ ದಿನಾಂಕ 29 ರವರೆಗೆ ಪ್ರತಿದಿನ ಸಂಜೆ 6.30 ಕ್ಕೆ ಶಿವಯೋಗಾಶ್ರಮದಲ್ಲಿ ನಡೆಯಲಿದೆ.  

ಶ್ರೀ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ಮಹಾಂತೇಶ ಶಾಸ್ತ್ರೀ (ಸಂತೆಬೆನ್ನೂರು) ಅವರಿಂದ ಪ್ರವಚನ ನಡೆಯಲಿದೆ.  ಸ್ಮರಣೋತ್ಸವ ಸಮಾರಂಭವು ಇದೇ ದಿನಾಂಕ 30ರ ಸೋಮವಾರ ಬೆಳಿಗ್ಗೆ 10 ಕ್ಕೆ ಜರುಗಲಿದೆ. ರಥೋತ್ಸವವು ಸೋಮವಾರ  ಸಂಜೆ 4 ಕ್ಕೆ ಏರ್ಪಾಡಾಗಿದೆ.

error: Content is protected !!