ಸಕಾಲಕ್ಕೆ ಸಾಲ ಮರುಪಾವತಿಯಾದರೆ ಮಾತ್ರ ಅಭಿವೃದ್ಧಿ

ಸಕಾಲಕ್ಕೆ ಸಾಲ ಮರುಪಾವತಿಯಾದರೆ ಮಾತ್ರ ಅಭಿವೃದ್ಧಿ

ರಾಣೇಬೆನ್ನೂರು ಮಾರ್ಕಂಡೇಶ್ವರ ಸಹಕಾರಿ ಮಹಾಸಭೆಯಲ್ಲಿ ಅಧ್ಯಕ್ಷ ಹನುಮಂತಪ್ಪ 

ರಾಣೇಬೆನ್ನೂರು, ಸೆ. 26-  ನಗರದ ಶ್ರೀ ಗುರು ಮಾರ್ಕಂಡೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಎಂಟನೇ ವಾರ್ಷಿಕ ಮಹಾಸಭೆ ನಡೆಯಿತು.  ಪದ್ಮಶಾಲಿ ಸಮಾಜದ ಮಾಜಿ ಅಧ್ಯಕ್ಷ  ಕೆ.ಕೆ ಹಳ್ಳಳ್ಳಿ ನಾಗರಾಜ ಅಗಡಿ, ಲಕ್ಷ್ಮಣ್ ಕಡ್ಲಿಬಾಳ, ಶಂಕ್ರಣ್ಣ ಗರಡಿಮನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು 

ಅಧ್ಯಕ್ಷತೆ ವಹಿಸಿದ್ದ ಸಹಕಾರಿ ಅಧ್ಯಕ್ಷ  ಹನುಮಂತಪ್ಪ ಮುಕ್ತೇನಹಳ್ಳಿ  ಮಾತನಾಡಿ, 2023-24ನೇ ಸಾಲಿನಲ್ಲಿ   ಲಾಭ ಗಳಿಸಿರುವುದು ಸಂತೋಷದ ವಿಚಾರ.  ಯಾವುದೇ ಸಹಕಾರಿ ಸಂಘಗಳು ಬೆಳೆಯಬೇಕಾದರೆ ಸಿಬ್ಬಂದಿ, ಪಿಗ್ಮಿ ಏಜೆಂಟರು, ನಿರ್ದೇಶಕರು ಶ್ರಮ ವಹಿಸಬೇಕು ಹಾಗೂ ಸಾಲವನ್ನು ಪಡೆದ ಸದಸ್ಯರು ಸಕಾಲಕ್ಕೆ   ಮರುಪಾವತಿ ಮಾಡಿದರೆ ಮಾತ್ರ   ಉತ್ತಮ ಸ್ಥಿತಿಯಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು 

ಇದೇ ಸಂದರ್ಭದಲ್ಲಿ 2023- 24ನೇ ಸಾಲಿನ  ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಪದ್ಮಶಾಲಿ ಸಮಾಜದ ವಿದ್ಯಾರ್ಥಿಗಳಾದ ಶ್ರೇಯಾ ಪಿ. ಕರಡಿಮನಿ,   ಸಂಜನಾ ಸುರೇಶ್ ಬಾದಾಮಿ, ಸುಜಾತ  ಸಹನ ಗುರು ,  ಪ್ರತಿಭಾ ಭೂಷಪ್ಪನವರ,  ಚೈತ್ರ ಮಂಚಿ,   ಶಂಕ್ರಪ್ಪ ನೇಕಾರ್  ಅವರಿಗೆ  ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಭೆಯಲ್ಲಿ ನಿರ್ದೇಶಕರುಗಳಾದ ನೀಲಪ್ಪ ಕುಮಾರಪ್ಪನವರ, ಎಲ್ಲಪ್ಪ ಗುತ್ತಲ್, ಪ್ರಕಾಶ್ ಅಗಡಿ, ಶಂಕ್ರಣ್ಣ ಗರಡಿಮನಿ, ನಾಗರಾಜ ಅಗಡಿ, ಶ್ರೀಮತಿ ಚೈತ್ರ ಹುಬ್ಬಳ್ಳಿ, ವಸುಂಧರ ಸಬ್ಬ ಉಪಸ್ಥಿತರಿದ್ದರು.

ಷೇರುದಾರರಾದ ಬಸವರಾಜ್, ನೇಕಾರ್ ಹನುಮಂತಪ್ಪ, ಅಗಡಿ ಸುರೇಶ್, ಬಾದಾಮಿ ಕರಬಸಪ್ಪ, ಕೋಗಳಿ ರಮೇಶ್, ಮೆಡಪಲ್ಲಿ ಗೋವಿಂದಪ್ಪ,    ಸಿಬ್ಬಂದಿ    ಮಂಜುಳ ರೋಗಣ್ಣನವರ, ಜಗದೀಶ್ ಅಗಡಿ ಗುರುರಾಜ್ ಕುಮಾರಪ್ಪನವರ, ಮಹಾಂತೇಶ್ ಮಲ್ಲೂರು ಹಾಜರಿದ್ದರು. 

ಕರಬಸಪ್ಪ ಹಳ್ಳಳ್ಳಿ ಪ್ರಾರ್ಥಿಸಿದರು.  ವ್ಯವಸ್ಥಾಪಕ  ಪ್ರೇಮನಾಥ್ ಲದ್ವಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರ್ ಹಿರೇಮಠ  ವಂದಿಸಿದರು.

error: Content is protected !!