ರೆಡ್ ಕ್ರಾಸ್‌ ಸಂಸ್ಥೆಯ ನೂತನ ರಕ್ತ ಸಂಗ್ರಹಣಾ ವಾಹನ ಉದ್ಘಾಟನೆ

ರೆಡ್ ಕ್ರಾಸ್‌ ಸಂಸ್ಥೆಯ ನೂತನ  ರಕ್ತ ಸಂಗ್ರಹಣಾ ವಾಹನ ಉದ್ಘಾಟನೆ

ದಾವಣಗೆರೆ, ಸೆ. 19 – ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಾವಣಗೆರೆಯ ನೂತನ ರಕ್ತ ಸಂಗ್ರಹಣಾ ವಾಹನ ಉದ್ಘಾಟನೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಾವಣಗೆರೆ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ನೆರವೇರಿಸಿದರು. 

  ಸಂದರ್ಭದಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಷಣ್ಮುಖಪ್ಪ, ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ. ನಾಗೇಂದ್ರಪ್ಪ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದಾವಣಗೆರೆ ಗೌರವ ಸಭಾಪತಿಗಳಾದ ಗೌಡರ ಚನ್ನಬಸಪ್ಪ, ಸಭಾಪತಿಗಳಾದ ಡಾ. ಎ. ಎಮ್. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್ ಜ್ಯೋತಿ, ಖಜಾಂಚಿ ಅನಿಲ್ ಬಾರಂಗಳ್, ನಿರ್ದೇಶಕ ಮೊಹಮ್ಮದ್ ಇನಾಯತ್‌ವುಲ್ಲಾ, ಶಿವಾನಂದ್ ಡಿ.ಎನ್, ರವಿಕುಮಾರ್ ಎ.ಜೆ., ಶ್ರೀಕಾಂತ್ ಬಗರೆ, ಕರಿಬಸಪ್ಪ ಟಿ., ವೈದ್ಯಾಧಿಕಾರಿ ಡಾ. ಪಿ.ಕೆ. ಬಸವರಾಜ್, ಕಛೇರಿ ವ್ಯವಸ್ಥಾಪಕ ರವೀಂದ್ರನಾಥ್ ಆರ್.ಡಿ., ರಕ್ತನಿಧಿ ಕೇಂದ್ರ ಸಂಯೋಜಕ ಶಿವಕುಮಾರ ಎನ್.ಜಿ., ಪ್ರಯೋಗಶಾಲಾ ಮೇಲ್ವಿಚಾರಕ ವಿನಾಯಕ ಆರ್, ಪ್ರಯೋಗಶಾಲಾ ತಂತ್ರಜ್ಞರಾದ ಜ್ಯೋತಿ ಕೆ. ಗುಡ್ಡದ್, ಗಿರೀಶ್ ಕೆ., ಪದ್ಮಬಾಯಿ, ಕೊಟ್ರೇಶ್ ಇತರರು ಹಾಜರಿದ್ದರು.

error: Content is protected !!