ಈರುಳ್ಳಿ ಬೆಳೆಗೆ ನೇರಳೆ ಎಲೆ ಮಚ್ಚೆ ರೋಗ ಬಾಧೆ

ಈರುಳ್ಳಿ ಬೆಳೆಗೆ ನೇರಳೆ ಎಲೆ ಮಚ್ಚೆ ರೋಗ ಬಾಧೆ

ನಿಬಗೂರು ಗ್ರಾಮದ  ಕ್ಷೇತ್ರೋತ್ಸವದಲ್ಲಿ ತೋಟಗಾರಿಕೆ ವಿಜ್ಞಾನಿ ಎಂ.ಜಿ ಬಸವನಗೌಡ

ಜಗಳೂರು ಸೆ.17- ಈ ವರ್ಷ ಅತೀ ಹೆಚ್ಚು ಮಳೆಯಿಂದಾಗಿ ಈರುಳ್ಳಿಯಲ್ಲಿ ನೇರಳೆ ಎಲೆ ಮಚ್ಚೆ ರೋಗದ ಬಾಧೆ ತೀವ್ರವಾಗಿದ್ದು, ಗಡ್ಡೆಗಳ ಬೆಳವಣಿಗೆಯೂ ಸಹ ಕುಂಠಿತವಾಗಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ   ತಿಳಿಸಿದರು.  

ಜಗಳೂರು ತಾಲ್ಲೂಕು ನಿಬಗೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ `ಈರುಳ್ಳಿಯಲ್ಲಿ ಭೀಮಾ ಡಾರ್ಕ್ ರೆಡ್ ತಳಿಯ ಕ್ಷೇತ್ರೋತ್ಸವ’ದಲ್ಲಿ  ಅವರು  ಮಾತನಾಡಿದರು.  

ಆದರೆ ಪ್ರಾತ್ಯಕ್ಷಿಕೆ ತಾಕುಗಳಲ್ಲಿ ಹಮ್ಮಿಕೊಂಡ ವೈಜ್ಞಾನಿಕ ನಿರ್ವಹಣಾ ಕ್ರಮಗಳಾದ ಟ್ರೈಕೋ ಡರ್ಮಾ ಬೀಜೋಪಚಾರ, ಲಘು ಪೋಷಕಾಂಶ ಗಳ ಬಳಕೆ ಹಾಗೂ ಅಗತ್ಯ ಸಸ್ಯ ಸಂರಕ್ಷಣಾ ಕ್ರಮ ಗಳಿಂದ ಕೆಲವೆಡೆ  ಈರುಳ್ಳಿ ಬೆಳೆ ಉತ್ತಮವಾಗಿ ಬಂದಿದೆ ಎಂದು ಹೇಳಿದರು. ರೈತರು ತಾವು ಬೆಳೆದ ತರಕಾರಿಗಳನ್ನು ಗುಣಮಟ್ಟದ ಆಧಾರದಲ್ಲಿ ವರ್ಗೀಕರಿಸಿ ಮಾರಾಟ ಮಾಡುವು ದರಿಂದ ಹೆಚ್ಚಿನ ಬೆಲೆಯನ್ನು ನಿರೀಕ್ಷಿಸಬಹು ದೆಂದು  ಅವರು ಸಲಹೆ ನೀಡಿದರು. 

 ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ  ಡಾ.  ಟಿ.ಜಿ ಅವಿನಾಶ್  ಮಾತನಾಡಿ, ರೈತರು ಈಗ ಬೆಳೆದಿರುವ ಈರುಳ್ಳಿ ಕೂಳೆಯಲ್ಲಿ ಮತ್ತೆ ಈರುಳ್ಳಿ ಬೆಳೆಯದೇ ಯಾವುದಾದರೊಂದು ಬೇರೆ ದ್ವಿದಳ ಧಾನ್ಯದ ಬೆಳೆಯನ್ನು ಬೆಳೆಯುವುದರಿಂದ ಮಣ್ಣು ಫಲವತ್ತತೆ ಜೊತೆಗೆ ರೋಗ ರುಜನೆಗಳೂ ಸಹ ಕಡಿಮೆಯಾಗುತ್ತವೆ ಎಂದು ತಿಳಿಸಿದರು.

ಗ್ರಾಮದ ಪ್ರಾತ್ಯಕ್ಷಿಕ ರೈತರಾದ   ನಾಗರಾಜ್ ,  ತಮ್ಮ ಬೆಳೆಯ ಅನುಭವಗಳನ್ನು  ಹಂಚಿಕೊಂಡರು.  ಕಾರ್ಯಕ್ರಮದಲ್ಲಿ ಬಿದರಕೆರೆ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ರೇವಣಸಿದ್ದಪ್ಪ, ರೈತರಾದ   ಗುರುಸಿದ್ದಪ್ಪನಗೌಡ,  ವೀರೇಶ್,  ಪ್ರವೀಣ,  ಕಲ್ಲೇಶ್,  ಗುರುಸಿ

error: Content is protected !!