`ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮಕ್ಕೆ ಶಾಸಕರ ಚಾಲನೆ

`ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮಕ್ಕೆ ಶಾಸಕರ ಚಾಲನೆ

ಮಲೇಬೆನ್ನೂರು, ಸೆ.18- ಗಾಂಧಿ ಜಯಂತಿ ಅಂಗವಾಗಿ ಸೆ.14 ರಿಂದ ಅ.1 ರವರೆಗೆ ದೇಶದಲ್ಲಿ ಹಮ್ಮಿಕೊಂಡಿರುವ ಸ್ವಚ್ಛತಾ ಹೀ ಸೇವಾ ಪಾಕ್ಷಿಕ-2024 ಕಾರ್ಯಕ್ರಮಕ್ಕೆ ಶಾಸಕ ಬಿ.ಪಿ.ಹರೀಶ್ ಅವರು ಶನಿವಾರ ಜಿಗಳಿ ಗ್ರಾಮದಲ್ಲಿ ಚಾಲನೆ ನೀಡಿದರು.

ನಂತರ ಗ್ರಾಮದ ವಾಲ್ಮೀಕಿ ವೃತ್ತದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದ ಶಾಸಕ ಹರೀಶ್ ಅವರು ಕಸ ಗುಡಿಸಿದರು.

ತಾ.ಪಂ. ಇಓ ಸುಮಲತಾ, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೂಪಾ ಸೋಮಶೇಖರ್, ಉಪಾಧ್ಯಕ್ಷ ಡಿ.ಎಂ.ಹರೀಶ್, ಗ್ರಾ.ಪಂ. ಸದಸ್ಯರಾದ ಎನ್.ಎಂ.ಪಾಟೀಲ್, ಕೆ.ಜಿ.ಬಸವರಾಜ್, ವೈ.ಆರ್.ಚೇತನ್‌ಕುಮಾರ್, ಮಹಾಂತೇಶ್, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ದೇವೇಂದ್ರಪ್ಪ, ಡಾ. ಎನ್.ನಾಗರಾಜ್, ಜಿ.ಆರ್.ಹಾಲೇಶ್, ಕುಮಾರ್, ಜಿ.ಪಿ.ಹನುಮಗೌಡ, ಡಿ.ಆರ್.ಮಧುಸೂದನ್, ಸಿ.ಎನ್.ಪರಮೇಶ್ವರಪ್ಪ, ಪೂಜಾರ್ ನಾಗರಾಜ್, ಮಾಕನೂರು ಶಿವು, ಬಿ.ನಿಂಗಾಚಾರಿ, ಕಲಾವಿದ ಡಿ.ರಂಗನಾಥ್, ಪಿಡಿಓ ಉಮೇಶ್, ಕಾರ್ಯದರ್ಶಿ ಸುನೀತಾ ಸೇರಿದಂತೆ ಗ್ರಾ.ಪಂ. ಸಿಬ್ಬಂದಿ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

error: Content is protected !!