ವಿನೂತನದಿಂದ ಶಿಕ್ಷಕರ ದಿನಾಚರಣೆ

ವಿನೂತನದಿಂದ ಶಿಕ್ಷಕರ ದಿನಾಚರಣೆ

ದಾವಣಗೆರೆ, ಸೆ. 17- ಇಲ್ಲಿನ ವಿದ್ಯಾನಗರ ವಿನಾಯಕ ಬಡಾವಣೆಯ ವಿನೂತನ ಮಹಿಳಾ ಸಮಾಜದಲ್ಲಿ ಮಾಸಿಕ ಸಭೆ ಹಾಗೂ ಶಿಕ್ಷಕರ ದಿನವನ್ನು ಆಚರಿಸಲಾಯಿತು. ರೇಖಾ ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಿಕ್ಷಕಿ ಶ್ರೀಮತಿ ಆಶಾ ಪ್ರಭಾಕರ್ ಅವರನ್ನು ಸನ್ಮಾನಿಸಲಾಯಿತು.

ವಾಣಿ ರಾಜ್ ಕಾರ್ಯಕ್ರಮ ನಿರೂಪಿಸಿದರು. ಶೈಲಾಜ ತಿಮ್ಮೇಶ್ ಪ್ರಾರ್ಥಿಸಿದರು. ಕಲ್ಪನಾ ವಿನಾಯಕ ಸ್ವಾಗತಿಸಿದರು. ರೂಪಾ ಶಂಕರ ಮೂರ್ತಿ ಅತಿಥಿಗಳನ್ನು ಪರಿಚಯಿಸಿದರು. ಸಭೆಯಲ್ಲಿ ರಂಜಿತ ಕುಮಾರ್, ವಿನೋದ ಶಿವು ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!