ಯಲವಟ್ಟಿಯಲ್ಲಿ ಇಂದು ಭಕ್ತಿ ಸಮರ್ಪಣೆ

ಯಲವಟ್ಟಿಯಲ್ಲಿ ಇಂದು ಭಕ್ತಿ ಸಮರ್ಪಣೆ

ಸಿರಿಗೆರೆಯಲ್ಲಿ ಇದೇ ದಿನಾಂಕ 24 ರಂದು ಜರುಗುವ ಲಿಂಗೈಕ್ಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರ 32ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಹರಿಹರ ತಾಲ್ಲೂಕಿನಿಂದ ಭಕ್ತಿ ಸಮರ್ಪಣೆ ಸಮಾರಂಭವನ್ನು ಮಲೇಬೆನ್ನೂರು ಸಮೀಪದ ಯಲವಟ್ಟಿ ಗ್ರಾಮದಲ್ಲಿ ಇಂದು ಬೆಳಿಗ್ಗೆ 11.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಹರಿಹರ ತಾಲ್ಲೂಕು ಸಾಧು ವೀರಶೈವ ಸಮಾಜದ ಕಾರ್ಯದರ್ಶಿ ನಿಟ್ಟೂರಿನ ಇಟಗಿ ಶಿವಣ್ಣ ತಿಳಿಸಿದ್ದಾರೆ. 

ದಿವ್ಯ ಸಾನ್ನಿಧ್ಯ : ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮತ್ತು ಯಲವಟ್ಟಿಯ ಗುರುಸಿದ್ಧಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ.

ಅಧ್ಯಕ್ಷತೆ : ಅಮರಾವತಿ ಮಹಾದೇವಪ್ಪ ಗೌಡ್ರು, ಮುಖ್ಯ ಅತಿಥಿಗಳು : ಎಸ್.ಎಸ್.ಮಲ್ಲಿಕಾರ್ಜುನ್, ಡಾ. ಪ್ರಭಾ ಮಲ್ಲಿಕಾರ್ಜುನ್, ಬಿ.ಪಿ.ಹರೀಶ್ ಸೇರಿದಂತೆ ಇತರರು.

error: Content is protected !!